ರಾಯಬಾಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಮತ್ತು ಮಾಂಡ್ ಸೋಭಾಣ್ ಸಂಸ್ಥೆ ಇವರ ಸಹಯೋಗದಲ್ಲಿ ಜೂ.12 ರಿಂದ 15 ದಿನಗಳ ಕಾಲ ಮಂಗಳೂರಿನ ಕಲಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರಕ್ಕೆ ರಾಯಬಾಗ ಪಟ್ಟಣದ ಖ್ಯಾತ ಕಲಾವಿದ ಡಾ.ಬಾಬುರಾವ್ ನಡೋಣಿಯವರು ಆಯ್ಕೆಯಾಗಿದ್ದು, ಈ ಶಿಬಿರದಲ್ಲಿ ನಾಡಿನ ಹೆಸರಾಂತ ಶಿಲ್ಪ ಕಲಾವಿದರು ಭಾಗವಹಿಸಿ ಕೊಂಕಣಿ ಸಂಸ್ಕೃತಿಯ ಸಿಮೆಂಟ್ ಕಲಾಕೃತಿಗಳನ್ನು ರಚಿಸಲಿದ್ದಾರೆ. ನಡೋಣಿಯವರು ಚಿತ್ರಕಲೆಯೊಂದಿಗೆ ಶಿಲ್ಪ ಕಲೆಯನ್ನು ರೂಢಿಸಿಕೊಂಡಂತಹ ನಾಡಿನ ಅಪರೂಪದ ಕಲಾವಿದರು.
