ಹೊಸಪೇಟೆ : ರಾಜ್ಯ ಸರ್ಕಾರ ಕೊಟ್ಟೂರು, ಕೂಡ್ಲಿಗಿ ಎರಡು ತಾಲೂಕುಗಳನ್ನು ಬರಪೀಡಿತ ಪ್ರದೇಶ ಪಟ್ಟಿಯಲ್ಲಿ ಕೈಬಿಟ್ಟಿದೆ, ಹೀಗಾಗಿ ಈ ಎರಡು ತಾಲೂಕಿಗಳನ್ನು ಕೂಡಲೇ ಬರಪೀಡಿತ ತಾಲೂಕುಗಳು ಅಂತ ಘೋಷಿಸಬೇಕು ಎಂದು ರೈತ ಸಂಘದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಅಂತ ಸರ್ಕಾರ ಘೋಷಿಸಿ, ಕೂಡ್ಲಿಗಿ ಕೊಟ್ಟೂರನ್ನು ಕೈಬಿಟ್ಟಿರುವುದು ಸರಿಯಲ್ಲ. ಈ ಎರಡು ತಾಲೂಕುಗಳನ್ನು ಸಹ ಬರಪೀಡಿತ ತಾಲೂಕುಗಳು ಅಂತ ಘೋಚಿಸಬೇಕು ಎಂದು ಒತ್ತಾಯಿಸಿದರು.
ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು, ಈ ಕುರಿತು ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಸರ್ಕಾರ ಮತ್ತು ಸಚಿವರು, ಶಾಸಕರು ಸ್ಪಂದಿಸಿಲ್ಲ. ಹೀಗಾಗಿ ಬೇಡಿಕೆ ಈಡೇರಿಸುವಂತೆ ಅ.10ರಂದು ಶಾಸಕರ ಮನೆ ಅಥವಾ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಶಾಸಕರು ಸ್ಪಂದಿಸದಿದ್ದರೆ ರಾಜೀನಾಮೆಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
"ಜೆನ್ನಿಮಿಲ್ಕ್ ಪ್ರಕರಣದಲ್ಲಿ ಸುಮಾರು 400-450 ರೈತರು ಹಣ ಕಳೆದುಕೊಂಡಿದ್ದಾರೆ. ಸಮಾರು 18 ಕೋಟಿ ರೂ. ರೈತರಿಗೆ ಬರಬೇಕಿದೆ.ಹೀಗಾಗಿ ಕೂಡಲೇ ನ್ಯಾಯ ಒದಗಿಸಬೇಕು.
ಇದೇ ವೇಳೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋದಾಗ, ನಮ್ಮ ಹೋರಾಟಕ್ಕೆ ಮಾಧ್ಯಮದವರು ಸಹಕರಿಸಿದ್ದರಿಂದಲೇ 19ನೇ ಕ್ರಷ್ಟ್ ಗೇಟ್ ನಿರ್ಮಾಣ ತ್ವರಿತಗತಿಯಲ್ಲಿ ಆಯಿತು. ಇದಕ್ಕೆ ಮಾಧ್ಯಮದವರೇ ಕಾರಣವಾಗಿದ್ದಾರೆ" ಎಂದು ಹೇಳಿದರು.
ತುಂಗಭದ್ರಾ ಆಡಳಿತ ಮಂಡಳಿಯವರು ರಾಯ ಬಸವ ಕಾಲುವೆಗಳಿಗೆ 180 ಕ್ಯೂಸೆಕ್ ನೀರು ಬಿಡುತ್ತೇವೆ ಅಂತ ಹೇಳಿ ಬರೀ 120 ಕ್ಯೂಸೆಕ್ ಮಾತ್ರ ನೀರು ಬಿಡುತ್ತಿದ್ದಾರೆ. ಜೊತೆಗೆ ಕೆರೆ ತುಂಬಿಸುವ ಯೋಜನೆಯಡಿ ಯಾವ ಕೆರೆಗೂ ನೀರು ತುಂಬಿಲ್ಲ, ಕೆರೆಗಳಲ್ಲಿ ಗಿಡ-ಗಂಟಿ ಬೆಳೆದಿದೆ. ಅಧಿವೇಶನದಲ್ಲಿ ರೈತರ ಸಮಸ್ಯೆ ಬಗೆಹರಿಯಲಿಲ್ಲ. ಈ ಬಾರಿ ವಿಶೇಷ ಅಧಿವೇಶನದಲ್ಲಿ ಶಾಸಕ ಗವಿಯಪ್ಪ ಅವರು ಮೇಜು ಕುಟ್ಟಿ ಈ ಭಾಗಕ್ಕೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು" ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಟಿ. ನಾಗರಾಜ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಕಾರ್ಯಾಧ್ಯಕ್ಷ ಮೆಟ್ರಿ ಜಡೆಪ್ಪ, ಪದಾಧಿಕಾರಿಗಳಾದ ಆರ್.ಆರ್. ತಾಯಪ್ಪ, ವಿ. ಗಾಳೆಪ್ಪ, ಮೂರ್ತಿ, ರಾಜಶೇಖರ ಇದ್ದರು.