Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ನೂತನ ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಕುರಿತು ವಿಶೇಷ ಉಪನ್ಯಾಸ

ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಸೆಮಿನಾರ್ ಹಾಗೂ ಅತಿಥಿ ಉಪನ್ಯಾಸ ವಿಭಾಗದ ವತಿಯಿಂದ ಎಂ.ಕೆ. ನಂಬಿಯಾರ್ ಮೂಟ್ ಕೋರ್ಟ್ ಸಭಾಂಗಣದಲ್ಲಿ ನೂತನ ಕಾರ್ಮಿಕ ಸಂಹಿತೆ ಕುರಿತು ವಿಶೇಷ ಅತಿಥಿ ಉಪನ್ಯಾಸವನ್ನು  ಆಯೋಜಿಸಲಾಗಿತ್ತು.
ಕಾನೂನು ವಿದ್ಯಾರ್ಥಿಗಳಲ್ಲಿ ನೂತನ ಕಾರ್ಮಿಕ ಸಂಹಿತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ವೇತನ ಸಂಹಿತೆ–2019 (Code on Wages, 2019) ಹಾಗೂ ವಿವಿಧ ಕಾರ್ಮಿಕ ಕಾನೂನುಗಳ ಏಕೀಕರಣ ಮತ್ತು ರದ್ದತಿಯ ಮೂಲಕ ಜಾರಿಗೆ ಬಂದಿರುವ ಮಹತ್ವದ ತಿದ್ದುಪಡಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳು (Labour and Industrial Relations) ವಿಷಯವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಉಪನ್ಯಾಸ ಅತ್ಯಂತ ಉಪಯುಕ್ತವಾಗಿತ್ತು.
ಎಲ್.ಎಲ್.ಬಿ., ಬಿ.ಎ. ಎಲ್.ಎಲ್.ಬಿ. ಹಾಗೂ ಬಿ.ಬಿ.ಎ. ಎಲ್.ಎಲ್.ಬಿ. ವಿಭಾಗಗಳ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಬಿ. ನಾಗೇಶ್ ಅವರು ನೂತನ ವೇತನ ಸಂಹಿತೆ–2019ರ ಕುರಿತು ಸಮಗ್ರ ಮಾಹಿತಿ ನೀಡಿದರು. ಉದ್ಯೋಗದಾತ–ಉದ್ಯೋಗಿ ಸಂಬಂಧ, ಕಾರ್ಮಿಕರ ವರ್ಗೀಕರಣ, ಗುತ್ತಿಗೆ ಕಾರ್ಮಿಕರು, ವೇತನ, ವೇತನ ನಿಗದಿ, ಪಾವತಿ ವಿಧಾನ, ಸೂಕ್ತ ಪ್ರಾಧಿಕಾರ, ಬೋನಸ್ ಪಾವತಿ, ಇನ್ಸ್‌ಪೆಕ್ಟರ್-ಕಮ್-ಫೆಸಿಲಿಟೇಟರ್, ಅಪರಾಧಗಳು ಮತ್ತು ದಂಡಗಳು, ಕೈಗಾರಿಕಾ ನ್ಯಾಯಮಂಡಳಿಗಳ ಮುಂದೆ ದಾವೆ ಸಲ್ಲಿಸುವ ವಿಧಾನ ಸೇರಿದಂತೆ ವಿವಿಧ ಪ್ರಮುಖ ಅಂಶಗಳನ್ನು ಅವರು ವಿವರಿಸಿದರು.
ನೂತನ ಕಾರ್ಮಿಕ ಕಾನೂನುಗಳು ಕಾರ್ಮಿಕ ಕಾನೂನು ವ್ಯವಸ್ಥೆಯನ್ನು ಹೇಗೆ ಸರಳೀಕರಿಸಿವೆ ಹಾಗೂ ಕಾರ್ಮಿಕರು, ಉದ್ಯೋಗದಾತರು ಮತ್ತು ಕಾನೂನು ವೃತ್ತಿಪರರ ಮೇಲೆ ಅದರ ಪ್ರಾಯೋಗಿಕ ಪರಿಣಾಮಗಳೇನು ಎಂಬುದರ ಕುರಿತು ಅವರು ಬೆಳಕು ಚೆಲ್ಲಿದರು. ಸಂವಾದಾತ್ಮಕ ಉಪನ್ಯಾಸದ ಮೂಲಕ ವಿದ್ಯಾರ್ಥಿಗಳು ಸಮಕಾಲೀನ ಕಾರ್ಮಿಕ ಕಾನೂನು ಸುಧಾರಣೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದುಕೊಂಡರು.
ಸುಮಾರು 150 ವಿದ್ಯಾರ್ಥಿಗಳು ಉಪನ್ಯಾಸದ ಪ್ರಯೋಜನ ಪಡೆದುಕೊಂಡು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್. ಮುತಾಲಿಕ್ ಹಾಗೂ ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೆಮಿನಾರ್ ಹಾಗೂ ಅತಿಥಿ ಉಪನ್ಯಾಸ ವಿಭಾಗದ ಅಧ್ಯಕ್ಷೆ ಪ್ರೊ. ಶಿಲ್ಪಾ ಎ. ರೈಕರ್ ಅವರು ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.
 ಪ್ರೊ. ಚೇತನ್‌ಕುಮಾರ್ ವಂದಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನ ಪರಿಷತ್ ಚುನಾವಣೆ,ಶಾಸಕ ಬಾಬಾಸಾಹೇಬ ಪಾಟೀಲ ಮತ ಚಲಾವಣೆ.ಇ-ಖಾತಾ, ಕಾವೇರಿ-2 ತಾಂತ್ರಿಕ ಸಮಸ್ಯೆಗಳಿಂದ ಬೆಳಗಾವಿಯಲ್ಲಿ ಆಸ್ತಿ ನೊಂದಣಿ ಕಗ್ಗಂಟು: ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಕ್ರೆಡೈ ಮನವಿಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳ ಗೆಲುವು ಖಚಿತ: ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ನೂತನ ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಕುರಿತು ವಿಶೇಷ ಉಪನ್ಯಾಸಕುಡುತಿನಿ  ಭೂಸಂತ್ರಸ್ಥರಿಂದ ಸ್ವಯಂಪ್ರೇರಿತ ಬಳ್ಳಾರಿ ಬಂದ್ಕಲೆ ಸಂಸ್ಕೃತಿ ಬೆಳೆಸಲು ಎಲ್ಲರೂ ಶ್ರಮಿಸಲು ಬಿ. ನಾಗರಾಜ ಕರೆಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಬೇಕು : ಡಾ.ಮಲ್ಲಮ್ಮ ನೇಸರಗಿಕೊಪ್ಪಳ ಜಿಲ್ಲೆಯ ಇತಿಹಾಸದಲ್ಲೇ ಒಂದು ಸುವರ್ಣ ದಾಖಲೆಯಾದ ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕೆ ಸೌಲಭ್ಯ ಕಲ್ಪಿಸಿಕೊಡಿ: ಸಿಇಒ ವರ್ಣಿತ್ ನೇಗಿವಿದ್ಯುತ ಖಾಸಗಿಕರಿಸಿದರೆ ರೈತರು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ : ಗಂಗಾಧರ ಮೇಟಿ