ಬೀಳಗಿ- ತಾಲೂಕಿನ ಬಾವಲತ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸನ್ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ (ಸಿಎಂಐಡಿಪಿ) ೧೦ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಶ್ರೀ ಪೂರ್ಣಾನಂದ ಮಠ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕರು, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾದ ಜೆ. ಟಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಬಾವಲತ್ತಿ ಗ್ರಾಮದಿಂದ ಕುಂದರಗಿ ಅಡ್ಡ ರಸ್ತೆ ಸಂಪರ್ಕಿಸುವ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯ ನಂತರ ಗುತ್ತಿಗೆದಾರರು ರಸ್ತೆ ಅಗೆದು ಕಡಿ ಹಾಕಿ ಹಾಗೆಯೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ, ಶಾಸಕ ಜೆ. ಟಿ. ಪಾಟೀಲ ವರು ಗುತ್ತಿಗೆದಾರರಿಗೆ ಕರೆ ಮಾಡಿ ಎರಡ್ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿಜಯವೇದಾಂಗ ಸ್ವಾಮಿಗಳು, ಕುಂದರಗಿ ರಾಮಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆರ್. ಆರ್. ಪೂಜಾರ, ಬೂದಿಹಾಳ (ಎಸ್.ಎ.) ಪಿಕೆಪಿಎಸ್ ಅಧ್ಯಕ್ಷ ಎ. ಎಲ್. ಪೂಜಾರ, ಮುಖಂಡರಾದ ವಿ. ಆರ್. ಪೂಜಾರ, ಬಿ. ಎ. ಪಾಟೀಲ, ಹನಮಂತ ಕನಸಗೇರಿ, ಪುಂಡಲೀಕಪ್ಪ ಮರೆಮ್ಮನವರ, ರಸೂಲ ಮುಜಾವರ, ಗೋವಿಂದಗೌಡ ಪಾಟೀಲ, ಕೃಷ್ಣಾ ನಜರದ, ಗಿರೀಶ ಮಡಿವಾಳರ, ಸಂಗಣ್ಣ ಮುರಕಾಳಚಿಟ್ಟಿ ಮತ್ತಿತರಿದ್ದರು.
ಬಾವಲತ್ತಿ ಗ್ರಾಮದಿಂದ ಕುಂದರಗಿ ಅಡ್ಡ ರಸ್ತೆ ಸಂಪರ್ಕಿಸುವ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯ ನಂತರ ಗುತ್ತಿಗೆದಾರರು ರಸ್ತೆ ಅಗೆದು ಕಡಿ ಹಾಕಿ ಹಾಗೆಯೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ, ಶಾಸಕ ಜೆ. ಟಿ. ಪಾಟೀಲ ವರು ಗುತ್ತಿಗೆದಾರರಿಗೆ ಕರೆ ಮಾಡಿ ಎರಡ್ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ವಿಜಯವೇದಾಂಗ ಸ್ವಾಮಿಗಳು, ಕುಂದರಗಿ ರಾಮಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆರ್. ಆರ್. ಪೂಜಾರ, ಬೂದಿಹಾಳ (ಎಸ್.ಎ.) ಪಿಕೆಪಿಎಸ್ ಅಧ್ಯಕ್ಷ ಎ. ಎಲ್. ಪೂಜಾರ, ಮುಖಂಡರಾದ ವಿ. ಆರ್. ಪೂಜಾರ, ಬಿ. ಎ. ಪಾಟೀಲ, ಹನಮಂತ ಕನಸಗೇರಿ, ಪುಂಡಲೀಕಪ್ಪ ಮರೆಮ್ಮನವರ, ರಸೂಲ ಮುಜಾವರ, ಗೋವಿಂದಗೌಡ ಪಾಟೀಲ, ಕೃಷ್ಣಾ ನಜರದ, ಗಿರೀಶ ಮಡಿವಾಳರ, ಸಂಗಣ್ಣ ಮುರಕಾಳಚಿಟ್ಟಿ ಮತ್ತಿತರಿದ್ದರು.