Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಭವಿಷ್ಯದ ಸಂರಕ್ಷಣೆ : ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿ


ಘಟಪ್ರಭಾ,ಜೂ,೦೬ : ನಮ್ಮ ಹಿಂದಿನ ಹಿರಿಯರು ಎಷ್ಟೆಲ್ಲಾ ಚಳುವಳಿಗಳನ್ನು ಮಾಡಿ ಪರಿಸರ ಸಂರಕ್ಷಣೆಯನ್ನು ಮಾಡಿದ್ದರು, ಇಂದು ನಾವೆಲ್ಲಾರು ಅವರು ಮಾಡಿದಂತ ಚಳುವಳಿಗಳನ್ನು ಮಾಡುವ ಅಗತ್ಯತೆ ಇಲ್ಲ ಆದರೆ ಅವರು ಉಳಿಸಿ ಬೆಳೆಸಿದ ಪರಿಸರವನ್ನು  ಸಂರಕ್ಷಣೆ ಮಾಡಿದರೆ ಸಾಕಾಗುತ್ತದೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಭವಿಷ್ಯದ ಸಂರಕ್ಷಣೆ ಮಾಡಿದಂತೆ ಎಂದು ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಅವರು ಮಲ್ಲಾಪೂರ ಪಿ.ಜಿ ಸರಕಾರಿ ಪ್ರೌಢಶಾಲೆಯಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಪುರಸಭೆ ಕಾರ್ಯಲಯ ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಮನಮೋಹತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ಹಿಂದೆ ಬಿಷ್ಣೋಯ್ ಚಳುವಳಿ, ಚಿಪ್ಕೋ ಚಳುವಳಿ, ಸೈಟೆಂಟ್ ವ್ಯಾಲಿ ಚಳುವಳಿ, ನರ್ಮದಾ ಬಚಾಮೋ ಆಂದೋಲನ, ಜಂಗಲ್ ಬಚಾಮೋ ಆಂದೋಲನಾ, ಅಪ್ಪಿಕೋ ಚಳುವಳಿ ಅಂತಹ ಹಲವಾರು ಚಳುವಳಿಗಳನ್ನು ನಡೆಸಿ ಪರಿಸರವನ್ನು ಸಂರಕ್ಷಣೆ ಮಾಡಿದ್ದಾರೆ. ಪರಿಸರ ಸಂರಕ್ಷಣೆ ನಮ್ಮೆಲ್ಲಾರ ಕರ್ತವ್ಯ, ದೇಶದಲ್ಲಿ ಕರೋನಾ ಬಂದಾಗ ಆಕ್ಸಿಜನ್ ಸಿಗದೆ ಎಷ್ಟೋ ಜನರು ಪ್ರಾಣ ಕಳೆದುಕೊಂಡರು ದೇವರು ನಮಗೆ ಎಲ್ಲಾವನ್ನು ನೀಡಿದರು ಯಾವುದೇ ಶುಲ್ಕವನ್ನು ವಿದಿಸುವುದಿಲ್ಲ. ಒಂದು ಮರ ಕಡಿಯುವ ಸಂದರ್ಭ ಬಂದರೆ ಹತ್ತು ಸಸಿಗಳನ್ನು ನೆಡಬೇಕು ವಿಶ್ವ ಪರಿಸರ ದಿನಾಚರಣೆ ಅಂದರೆ ಕೇವಲ ಗಿಡ ಹಚ್ಚಲಕ್ಕೆ ಮಾತ್ರ ಸೀಮಿತವಲ್ಲ ನೀರಿನ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ ಬಳಕೆ ನಿಯಂತ್ರಣ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. 
       ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಮ್.ಎಸ್.ಪಾಟೀಲ, ಹಿರಿಯ ಮುಖಂಡರಾದ ಡಿ.ಎಮ್.ದಳವಾಯಿ, ಕಾಡಪ್ಪ ಕರೋಶಿ, ಈರಣ್ಣ ಕಲಕುಟಗಿ, ಮುಖ್ಯೋಪಾಧ್ಯಯರಾದ ಅಶೋಕ ಮಲಬನ್ನವರ, ಸುರೇಶ ಪೂಜಾರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಮಲ್ಲು ಕೋಳಿ, ಶ್ರೀಕಾಂತ ಮಹಾಜನ, ಅಪ್ಪಸಾಬ ಮುಲ್ಲಾ, ಲಕ್ಷ್ಮಣ ಮೇತ್ರಿ ಹಾಗೂ ಪುರಸಭೆ ಸಿಬ್ಬಂದಿ ಮತ್ತು ಶಿಕ್ಷಕರು ಇದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೋಯಾಲುಕ್ಕಾಸ್ ಫೌಂಡೇಶನ್‌ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣ ಕಿಟ್ ವಿತರಣೆಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್‌ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆಅಹಿಂದ ಕೇವಲ ರಾಜಕೀಯ ಘೋಷಣೆಯಾಗಬಾರದು; ಅದು ಸಮಾಜ ಪರಿವರ್ತನೆಯ ಮಹಾ ಚಳವಳಿಯಾಗಬೇಕು – ಹೊನ್ನುರಸ್ವಾಮಿ ಕೆ.ಟಿಸರಕಾರಿ‌ ಪದವಿ ಮಹಾವಿದ್ಯಾಲಯಕ್ಕೆ ಮಂಜೂರಗಾಗಿ ಕರವೇ ಆಗ್ರಹಇಂದು ನೆಟ್ಟ ಸಸಿ ನಾಳೆ ಮರವಾಗಿಸುವುದೇ ಪರಿಸರ ದಿನಾಚರಣೆಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಪೊಸಿಸಿ :ನ್ಯಾಯಾದೀಶ ಚವ್ಹಾಣ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ: "ನಮ್ಮ ಭೂಮಿ ನಮ್ಮ ಜವಾಬ್ದಾರಿ"ವಿಶ್ವ ಪರಿಸರ ದಿನಾಚರಣೆಪರಿಸರ ಸಂರಕ್ಷಣೆ ಮಾಡುವುದು ನಮ್ಮ ಭವಿಷ್ಯದ ಸಂರಕ್ಷಣೆ : ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿನಿತ್ಯವೂ ಪರಿಸರ   ದಿನವಾಗಲಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು