ಬಳ್ಳಾರಿ. ಸೆ. 04 : ತಾಲೂಕಿನ ಬೆಳಗಲ್ಲು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆಯ ಪ್ರಯುಕ್ತ ಡಾ. ಬಿಆರ್ ಅಂಬೇಡ್ಕರ್ ಕೃಪಾಪೋಷಿತ ಕರ್ನಾಟಕ ನಾಟಕ ಮಂಡಳಿ ಬೆಳಗಲ್ಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ಆಗಸ್ಟ್ 29ರ ಶನಿವಾರದಂದು ರಾತ್ರಿ 8:30ಕ್ಕೆ ಪ್ರಮೀಳಾ ದರ್ಬಾರ್ ಆರ್ಥತ್ ಅರ್ಜುನನ ಗರ್ವಭಂಗ ಎಂಬ ಸುಂದರ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸಲಾಯಿತು ಎಂದು ನಾಟಕದ ವ್ಯವಸ್ಥಾಪಕ ಆಯೋಜಕರಾದ ಏಕೆ ಯನ್ನಪ್ಪ ಮತ್ತು ಏಕೆ ಸಿದ್ದಪ್ಪ ತಿಳಿಸಿದರು.
ಈ ನಾಟಕದಲ್ಲಿ ಬಾಲಕೃಷ್ಣನಾಗಿ ಏರಿಸ್ವಾಮಿ, ಧರ್ಮರಾಯನಾಗಿ ಪೋತಪ್ಪ, ಅರ್ಜುನನಾಗಿ ಎರಿ ಸ್ವಾಮಿ, ಮಯೂರ ದ್ವಜನಾಗಿ ಏಕೆ ರಾಜ , ಕೃಷ್ಣನಾಗಿ ಲೋಕಪ್ಪ ಸುಗ್ಗನಹಳ್ಳಿ, ನಕುಲ ಧ್ವಜನಾಗಿ ಪವನ್ ವೃಶ್ಚಿಕೇತು ಆಗಿ ಕೊಟ್ರೇಶ್ ಪ್ರದ್ದುನ್ನನಾಗಿ ಏ.ಕೆ ಇರಿ ಸ್ವಾಮಿ ತಾಮ್ರದ್ವಜನಾಗಿ ಕಂಪ್ಲಿ ಹಿರಿ ಸ್ವಾಮಿ ಬಬ್ರುವಾಹನನಾಗಿ ಗಿರಿ ಸ್ವಾಮಿ ಸೇರಿದಂತೆ ಮತ್ತು ಮಹಿಳಾ ಪಾತ್ರದಲ್ಲಿ ಪ್ರಮೀಳಾ ಮತ್ತು ಕುಮದ್ವತಿ ಪಾತ್ರಧಾರಿಯಾಗಿ ಚೌಡಾಪುರ ಮೀನಾಕ್ಷಿ ರುಕ್ಮಿಣಿಯಾಗಿ ತುಮಕೂಡ್ಲಿಗಿ ವಿಚಿತ್ರ ರೇಖೆ ಮತ್ತು ಚಿತ್ರಾಂಗ ಪಾತ್ರಧಾರಿಯಾಗಿ ಮಂಜುಳಾ ದಾವಣಗೆರೆ ಇವರು ಅಭಿನಯಿಸಿದರು.
ಈ ನಾಟಕದ ಹಿನ್ನೆಲೆ ಸಂಗೀತದಲ್ಲಿ ಹಾರ್ಮೋನಿಯಂ ಜಾನೆ ಕುಂಟೆ ಬರಮಪ್ಪ, ತಬಲ ಉತ್ತನೂರು ರಂಗಪ್ಪ ಪ್ಯಾಡ್ ದಾವಣಗೆರೆ ವೆಂಕಟೇಶ್ ಮತ್ತು ಹಿನ್ನೆಲೆ ಗಾಯಕ ರಾಗಿ ನಿಂಬಗಲ್ ವಿರೇಶ ಸ್ವಾಮಿ, ಹಾವಿನ ಹಾಳ್ ಮಾರೆಪ್ಪ ಮೆಟ್ರಿ ದೊಡ್ಡಬಸಪ್ಪ ಬೆಳಗಲ್ ರುದ್ರಪ್ಪ ನಡೆಸಿಕೊಟ್ಟರು. ಮತ್ತು ಸಾರಥಿಯಾಗಿ ಗುಡ್ದೂರು ಪಾಂಡು ಕಥಾನಾಯಕರಾಗಿ ಹಾಗಲೂರು ಪರಶುರಾಮ ಕಾರ್ಯ ನಿರ್ವಹಿಸಿದರು. ರಂಗಸಜ್ಜಿ ಕೆ ಮತ್ತು ವಸ್ತ್ರ ಅಲಂಕಾರವನ್ನು ಎಮ್ಮಿಗನೂರು ಬಸಪ್ಪ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಏಕೆ ಹುಲುಗಪ್ಪ ಹೆಚ್ಚು ಹುಲಿಗಪ್ಪ ಏಕೆ ಮಹಾಲಿಂಗಯ್ಯ ಮತ್ತು ಗ್ರಾಮದ ಮುಖಂಡರಾದ ಎಚ್ ಪಂಪನಗೌಡ ಪಾಲಾಕ್ಷಿ ಗೌಡ ನಾಗಪ್ಪ ಗೌಡ ನಾಗಭೂಷಣ ಸ್ವಾಮಿ ಮಂಜುನಾಥ ಸ್ವಾಮಿ ಉಪ್ಪಾರ್ ಬಸಪ್ಪ ಬಿ ಎಲ್ಲಪ್ಪ ಸೇರಿದಂತೆ ಹಲವಾರು ಜನ ಇದ್ದರು.
ಈ ನಾಟಕವನ್ನು ಬೆಳಗಲ್ಲು ಗ್ರಾಮದ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಕಲಾಭಿಮಾನಿಗಳು ಮತ್ತು ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸಿ ಆನಂದಿಸಿದರು.