Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿಯಲ್ಲಿ ರಾಷ್ಟಿçÃಯ ಶಸ್ತçಚಿಕಿತ್ಸಕರ ವಾರಾಚರಣೆ: ಯುವ ಜನತೆಗೆ ಆರೋಗ್ಯ ಅರಿವು ಕಾರ್ಯಕ್ರಮ


ಬಳ್ಳಾರಿ,ಜೂ.11
ರಾಷ್ಟಿçÃಯ ಶಸ್ತçಚಿಕಿತ್ಸಕರ ವಾರಾಚರಣೆ ಅಂಗವಾಗಿ, ಕೆಎಸ್‌ಸಿಎಎಸ್‌ಐ-ಬಳ್ಳಾರಿ ಶಾಖೆಯ ವತಿಯಿಂದ ಬುಧವಾರ ನಗರದ ಆಲಂ ಕರಿಬಸಪ್ಪ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ‘ಕ್ಯಾಂಪಸ್ ಹೆಲ್ತ್ ಕನೆಕ್ಟ್’ ಎಂಬ ವಿಶೇಷ ಆರೋಗ್ಯ ಸಂಪರ್ಕ ಕಾರ್ಯಕ್ರಮ ಜರುಗಿತು.
‘ಆರೋಗ್ಯವಂತ ಯುವಕರು, ಆರೋಗ್ಯವಂತ ಭವಿಷ್ಯ’ ಎಂಬ ಮಹತ್ತರ ಧ್ಯೇಯೋದ್ದೇಶದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ತರಗತಿ ಪರಿಧಿಯ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ಶೇಕಪ್ಪ ಸಿ. ಮಳಗಿಮಣಿ, ಡಾ.ವೈ. ಗುರುಬಸವನ ಗೌಡ, ಡಾ.ಶಂಕರ ಮತ್ತು ಡಾ. ಶೈಕ್ ಫರ್ಹಾನ್ ಅವರು ಇಂದಿನ ಯುವ ಪೀಳಿಗೆಗೆ ಅಗತ್ಯವಿರುವ ಆರೋಗ್ಯಕರ ಜೀವನಶೈಲಿ, ರೋಗ ನಿರೋಧಕ ಆರೋಗ್ಯ ಸೇವೆಗಳು ಹಾಗೂ ಸಮಾಜದ ಬಗ್ಗೆ ಹೊಂದಿರಬೇಕಾದ ಸಾಮಾಜಿಕ ಜವಾಬ್ದಾರಿಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
*ರಕ್ತದಾನ ಶಿಬಿರದ ಜಾಗೃತಿ:*
ಇದೇ ಸಂದರ್ಭದಲ್ಲಿ ಬಳ್ಳಾರಿಯ ಬಿಎಂಸಿಆರ್‌ಸಿ ಯಲ್ಲಿ ಮುಂಬರುವ ಜೂನ್ 13 ಮತ್ತು 14 ರಂದು ಆಯೋಜಿಸಲಾಗಿರುವ ಬೃಹತ್ ರಕ್ತದಾನ ಶಿಬಿರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ರಕ್ತದಾನ ಮಾಡುವುದರ ಮಹತ್ವವನ್ನು ವಿವರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಸ್‌ಸಿಎಎಸ್‌ಐ ಬಳ್ಳಾರಿ ಶಾಖೆಯ ಅಧ್ಯಕ್ಷ ಡಾ.ಶೇಕಪ್ಪ ಮಳಗಿಮಣಿ, ಕಾರ್ಯದರ್ಶಿ ಡಾ.ಗುಡೆಕೋಟೆ ರವಿಕುಮಾರ್, ಸಂಯುಕ್ತ ಕಾರ್ಯದರ್ಶಿ ಡಾ.ಶೈಕ್ ಫರ್ಹಾನ್, ಎಎಸ್‌ಐ ರಾಷ್ಟಿçÃಯ ಕಾರ್ಯದರ್ಶಿ ಡಾ.ದಿವಾಕರ್ ಗಡ್ಡಿ ಹಾಗೂ ಕೆಎಸ್‌ಸಿಎಎಸ್‌ಐ ಖಜಾಂಚಿ ಡಾ.ವೈ.ಗುರುಬಸವನ ಗೌಡ ಸೇರಿದಂತೆ ಶಸ್ತçಚಿಕಿತ್ಸಾ ವಿಭಾಗದ ಸಹೋದ್ಯೋಗಿಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜು ವಿದ್ಯಾರ್ಥಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಈ ಕಾರ್ಯಕ್ರಮವು, ಅವರಲ್ಲಿ ಆರೋಗ್ಯದ ಕುರಿತು ಹೊಸ ಭರವಸೆ ಹಾಗೂ ಮೆಚ್ಚುಗೆ ಮೂಡಿಸುವಲ್ಲಿ ಯಶಸ್ವಿಯಾಯಿತು

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST