ಗುರ್ಲಾಪೂರ ೧೮ – ಮಕ್ಕಳು ನಮ್ಮ ದೇಶದ ಸಂಪತ್ತು ನಮ್ಮ ಮನೆಯ ಆಶಾಕಿರಣಗಳು, ಬಾಲ್ಯದಲ್ಲಿ ಅವರಿಗೆ ನಯ ವಿನಯ ಒಳ್ಳೆಯ ಸಂಸ್ಕಾರ ಕೊಟ್ಟು ತಾಯಂದಿರು ಹಾಗೂ ಪಾಲಕರು ಬೆಳೆಸಬೇಕು ಯಾವುದೇ ಕಾರಣಕ್ಕೂ ಮೊಬೈಲ್ ಹುಚ್ಚು ಅವರಿಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕೆಂದು ಕೆಪಿಸಿಸಿ ಸದಸ್ಯರಾದ ಕಂಕಣವಾಡಿಯ ಅರ್ಜುನ ನಾಯಿಕವಾಡಿ ಹೇಳಿದರು.
ಅವರು ಸ್ವತಂತ್ರ ದಿನಾಚರಣೆಯ ಅಂಗವಾಗಿ ಸಂಕೇಶ್ವರ ನಗರದಿಂದ ಕೂಡಲ ಸಂಗಮದವರೆಗೆ ಮಕ್ಕಳು ನಮ್ಮ ದೇಶದ ಭವಿಷ್ಯ ದಯವಿಟ್ಟು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ ಎಂಬ ಸಂದೇಶದೊಂದಿಗೆ ವಿನೂತನ ಸೈಕಲ್ ಜಾಥಾ ಹೊರಟ ಸಂಕೇಶ್ವರದ ರಮೇಶ ಪೂಜಾರಿ ಅವರನ್ನು ಕಂಕಣವಾಡಿಯಲ್ಲಿ ಭವ್ಯವಾಗಿ ಸ್ವಾಗತಿಸಿ ಸತ್ಕರಿಸಿ ಬೀಳ್ಕೊಟ್ಟು ಮಾತನಾಡುತ್ತಾ ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಗೀಳು ಅಂಟುವ ಹಾಗೇ ನೋಡಿಕೊಳ್ಳಿರಿ, ಯುವಜನತೆ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡಿ ತಮ್ಮ ಭಾವಿ ಜೀವನವನ್ನು ರೂಪಿಸಿಕೊಳ್ಳಬೇಕು.
ಆಗಿನ ಕಾಲದಲ್ಲಿ ತಾಯಂದಿರು ಮಕ್ಕಳು ಅತ್ತಾಗ ಲಾಲಿ ಹಾಡಿ ಚುಕ್ಕೆ, ಚಂದಿರರನ್ನು ತೋರಿಸಿ ಸಮಾಧಾನಪಡಿಸುತ್ತಿದ್ದರು, ಈಗ ಮೊಬೈಲ್ ಕೈಗೆ ಕೊಟ್ಟು ಮಕ್ಕಳನ್ನು ಸಂತೈಸುವ ಕಾಲ ಬಂದಿದೆ ಇದು ಬದಲಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ|| ಅರವಿಂದ ಗದಾಡಿ, ಸದಾಶಿವ ಹೊಸೂರ, ನಾರಾಯಣ ಅಗ್ನೆಪ್ಪಗೋಳ, ಬಾಳಪ್ಪಾ ಅರಭಾಂವಿ, ಮಾರುತಿ ಅಗ್ನೆಪ್ಪಗೋಳ, ರವಿ ಪೂಜೇರಿ, ಬಸವರಾಜ ಮರ್ದಿ, ರಾಮು ಬಳ್ಳಾರಿ, ಗುರುರಾಜ ನಾಯಿಕವಾಡಿ, ಯಮನಪ್ಪಾ ಕಂಬಾರ, ಮಹಾದೇವ ಮಂಗಸೂಳಿ ಮತ್ತು ಅನೇಕರು ಉಪಸ್ಥಿತರಿದ್ದರು.