ಸಂಕೇಶ್ವರ: ಹುಕ್ಕೇರಿ ತಾಲೂಕಿನ ೨೨ ಹಾಗೂ ಚಿಕ್ಕೋಡಿ ತಾಲೂಕಿನ ೧೧ ಕೆರೆಗಳಿಗೆ ಪಟ್ಟಣದ ಹಿರಣ್ಯಕೇಶಿ ನದಿ ದಡದಲ್ಲಿರುವ ಪಂಪಹೌಸ್ ನಿಂದ ಪ್ರಸ್ತುತ ವರ್ಷದ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದಿಂದ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ ಸಹಕಾರಿ ಸಂಘಕ್ಕೆ ಕಳೆದ ೪ ವರ್ಷದಿಂದ ೨೦ ಕೋಟಿ ರೂಪಾಯಿ ಬಾಕಿ ಇದ್ದರೂ ಸಹಿತ ರೈತರ ಹಿತದೃಷ್ಠಿಯಿಂದ ಕೆರೆಗಳಿಗೆ ನೀರು ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ,
ಇದನ್ನು ರಾಜ್ಯ ಅರ್ಥ ಮಾಡಿಕೊಂಡು ವಿದ್ಯುತ ಸಹಕಾರಿ ಸಂಘಕ್ಕೆ ಬರಬೇಕಾದ ೨೦ ಕೋಟಿ ರೂಪಾಯಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶಿವಾನಂದ ಮುಡಶಿ, ಸುನೀಲ ಪರ್ವತರಾವ, ಸತ್ಯಪ್ಪಾ ನಾಯಿಕ, ಪ್ರಶಾಂತ ಪಾಟೀಲ, ರೋಹನ ನೇಸರಿ, ಆನಂದ ಸಂಸುದ್ದಿ, ಚೇತನ ಬಶಟ್ಟಿ, ಸಂದೀಪ್ ದವಡತೆ ಸೇರಿದಂತೆ ಅನೇಕರಿ ಹಾಜರಿದ್ದರು.
