Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಗೀತದಿಂದ ಮಾನಸಿಕ ನೆಮ್ಮದಿ:ರನ್ನ ವಿಚಾರ ವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಅಭಿಮತ


ಮಹಾಲಿಂಗಪುರ:ಸಂಗೀತ ಕೇವಲ ಮನರಂಜನೆ ಮಾಧ್ಯಮವಲ್ಲ ಶಾಂತಿಯುತ ಹಾಡುಗಳನ್ನು ಕೇಳುವದರಿಂದ ಒತ್ತಡ,ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ ಮನಸ್ಸನ್ನು ಪ್ರಶಾಂತವಾಗಿಡುತ್ತದೆಯಲ್ಲದೆ ನಿದ್ರಾಹೀನತೆ ಸಮಸ್ಯ ದೂರಾಗುತ್ತದೆ ಎಂದು ರನ್ನ ವಿಚಾರವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಹೇಳಿದರು.
ಇಲ್ಲಿಯ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ರನ್ನವಿಚಾರ ವೇದಿಕೆ ವತಿಯಿಂದ ರವಿವಾರ ಸಂಜೆ ಆಯೋಜಿಸಿದ್ದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂಗೀತ ಕರ್ಣ ಮಾಧುರ್‍ಯವಾಗಿರಬೇಕು.ಅಂತಹ ಸಂಗೀತವು ಮಾನಸಿಕ ಪ್ರಸನ್ನತೆ ನೀಡಿ ರಕ್ತದೊತ್ತಡ ಕಡಿಮೆ ಮಾಡಿ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯ ಸಂಚಾಲಕ ಮ,ಕೃ,ಮೇಗಾಡಿ ಮಾತನಾಡಿ ಮೇಲು ಕೀಳು ಜಾತಿ ಮತ ಎಂಬ ಬೇದವಿಲ್ಲದ ಕಲೆ ಸಂಗೀತ.ಕಿವಿಯೊಳಗೆ ಹಾದು ನರನಾಡಿಗಳಲ್ಲಿ ಪ್ರವಹಿಸಿ  ಮನಸ್ಸಿನ ಬೇಸರ ಸಂಕಟ ನಿವಾರಿಸಿ ಹೊಸ ಚೈತನ್ಯ ತುಂಬುತ್ತದೆ,ಸಂಗೀತವಿಲ್ಲದ ಜೀವನ ನೀರಸ.ಸಂಗೀತ  ಆತ್ಮಕ್ಕೆ ಆಹಾರ ನೀಡುವ ಕಲೆ ದೇವತೆಗಳ ಭಾಷೆ ಎಂದರು.
ಬಾಕ್ಸ:ಸಂಗೀತವನ್ನು ಜನತೆ ಇಷ್ಟಪಡುತ್ತಾರೆ ಎನ್ನುವುದಕ್ಕೆ ಇಲ್ಲಿ ಸೇರಿದ ಅಪಾರ ಜನಸ್ತೋಮ ಸಾಕ್ಷಿಯಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರನ್ನ ವಿಚಾರ ವೇದಿಕೆಯ ಸದಸ್ಯರಾಗಿ ಕನ್ನಡ ನಾಡು ನುಡಿಯ ಸೇವೆ ಮಾಡಬೇಕು.........ಜಿ.ಎಸ್.ಗೊಂಬಿ ರನ್ನ ವಿಚಾರ ವೇದಿಕೆ ಮಹಾಲಿಂಗಪುರ.
ಇಂಪಾದ ಗಾಯನ:ಬೆಂಗಳೂರಿನ ಸಂಗೀತ ಕಲಾವಿದರಾದ ರಕ್ಷಿತ್ ಕುಲಕರ್ಣಿ,ವಿನಾಯಕ ಇನಾಮದಾರ ಹಾಗೂ ಶ್ರೇಯಶ್ರೀ ಇನಾಮದಾರ ಅವರ ಶಾಸ್ತ್ರೀಯ ಸಂಗೀತ ಗಾಯನ,ಭಾವಗೀತೆ,ಭಕ್ತಿಗೀತೆ ವಚನ ಗಾಯನ ಜನಮನಸೂರ್ಯಗೊಂಡವು.ವಿಜಯಪುರದ ವಿನಯ ಕುಲಕರ್ಣಿ ಅವರ ತಬಲಾ ವಾದನ ಹಾಗೂ ಈಚಲಕರಂಜಿಯ ತ್ರಿಗುಣ ಪೂಜಾರಿ ಅವರ ಹಾರ್‍ಮೋನಿಯಂ ವಾದನ ಸಂಗೀತಕ್ಕೆ ಮೆರಗು ನೀಡಿದವು. ಪ್ರೇಕ್ಷಕರು ಖುಶಿಗೊಂಡು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಹೊರಹಾಕಿದರು.
ರನ್ನ ವಿಚಾರ ವೇದಿಕೆ ಉಪಾಧ್ಯಕ್ಷ ಬಸವರಾಜ ಮೇಟಿ,ಮಾಧ್ಯಮ ಕಾರ್ಯದರ್ಶಿ ಎಸ್.ಎಸ್.ಈಶ್ವರಪ್ಪಗೋಳ,ಕೋಶಾಧ್ಯಕ್ಷ ಈರಣ್ಣ ಹಲಗತ್ತಿ,ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಗೊಂಬಿ,ಅಣ್ಣಾಜಿ ಫಡತಾರೆ,,ಶ್ರೀಶೈಲಪ್ಪ ಉಳ್ಳಾಗಡ್ಡಿ,ಗುರುಲಿಂಗ ಅಮ್ಮಣಗಿ,ದಾಕ್ಷಾಯಣಿ ಮಂಡಿ,ಅಕ್ಕೂತಾಯಿ ಕಿಚಡಿ,ಶಕುಂತಲಾ ತೇರದಾಳ,ಗಣ್ಯರಾದ ಲಕ್ಕಪ್ಪ ಚಮಕೇರಿ,ಎಂ,ಎಸ್,ಮುಗಳಖೋಡ ಮುಂತಾದವರು ಇದ್ದರು.

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸಿಟಿ ಸೈಕ್ಲಿಂಗ್ ಲೀಗ್ಯರಗಟ್ಟಿ: ಖಾಯಂ ನ್ಯಾಯಾಲಯಕ್ಕೆ ಚಾಲನೆ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿಗಳ  ಆದೇಶ: ನೌಕರರ ಸಂಘದ ಹೋರಾಟಕ್ಕೆ ಸಂದ ಜಯ ಮಹೇಶ ಹುಬ್ಬಳ್ಳಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಸಿಂಗೆ ಉಚ್ಛಾಟನೆಗೆ ದಲಿತ ಮುಖಂಡರ ಆಗ್ರಹಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಹನಮಂತ ಮಡಿವಾಳರ ಅವಿರೋಧ ಆಯ್ಕೆ*ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಿ:  ಮಹಾಂತೇಶ ಬಾಡಗಿ ಆಗ್ರಹಘಟಪ್ರಭಾ ರೇಲ್ವೆ  ಇಲಾಖೆ ಆಯ್  ಜಿ ತಿರಿಪಾಲ  ಮತ್ತು ಮಲ್ಲಿಕಾರ್ಜುನ ಇಂಗಳೆ  ಅವರಿಗೆ ಬೀಳ್ಕೊಡುಗೆ ಸಮಾರಂಭ.ಬಸ್ ನಿಲ್ದಾಣದಲ್ಲಿ ಯರ್ರಾ ಬಿರ್ರಿ ಖಾಸಗಿ ವಾಹನ ನಿಲುಗಡೆ : ಪ್ರಯಾಣಿಕರ ಪರದಾಟನಮ್ಮದು ಭಯೋತ್ಪಾದಕರಿಗೆ ಬಿರಿಯಾನಿಕೊಟ್ಟು ಸಲಹುವ ಸರ್ಕಾರವಲ್ಲ: ಸಿ.ಟಿ.ರವಿ.ಸೂರ್ಯ ನ್ಯೂಸ್ ಕನ್ನಡ ವಾರ್ಷಿಕೋತ್ಸವದಲ್ಲಿ ಹೊನ್ನುರಸ್ವಾಮಿ ಕೆ.ಟಿ. ಅವರಿಗೆ “ನಿರ್ಭೀತ ವರದಿಗಾರ ರತ್ನ” ಪ್ರಶಸ್ತಿ ಪ್ರದಾನ