ಮಹಾಲಿಂಗಪುರ:ಸಂಗೀತ ಕೇವಲ ಮನರಂಜನೆ ಮಾಧ್ಯಮವಲ್ಲ ಶಾಂತಿಯುತ ಹಾಡುಗಳನ್ನು ಕೇಳುವದರಿಂದ ಒತ್ತಡ,ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ ಮನಸ್ಸನ್ನು ಪ್ರಶಾಂತವಾಗಿಡುತ್ತದೆಯಲ್ಲದೆ ನಿದ್ರಾಹೀನತೆ ಸಮಸ್ಯ ದೂರಾಗುತ್ತದೆ ಎಂದು ರನ್ನ ವಿಚಾರವೇದಿಕೆ ಅಧ್ಯಕ್ಷ ಗುರುರಾಜ ಖಾಸನೀಸ ಹೇಳಿದರು.
ಇಲ್ಲಿಯ ಶ್ರೀ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ರನ್ನವಿಚಾರ ವೇದಿಕೆ ವತಿಯಿಂದ ರವಿವಾರ ಸಂಜೆ ಆಯೋಜಿಸಿದ್ದ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂಗೀತ ಕರ್ಣ ಮಾಧುರ್ಯವಾಗಿರಬೇಕು.ಅಂತಹ ಸಂಗೀತವು ಮಾನಸಿಕ ಪ್ರಸನ್ನತೆ ನೀಡಿ ರಕ್ತದೊತ್ತಡ ಕಡಿಮೆ ಮಾಡಿ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯ ಸಂಚಾಲಕ ಮ,ಕೃ,ಮೇಗಾಡಿ ಮಾತನಾಡಿ ಮೇಲು ಕೀಳು ಜಾತಿ ಮತ ಎಂಬ ಬೇದವಿಲ್ಲದ ಕಲೆ ಸಂಗೀತ.ಕಿವಿಯೊಳಗೆ ಹಾದು ನರನಾಡಿಗಳಲ್ಲಿ ಪ್ರವಹಿಸಿ ಮನಸ್ಸಿನ ಬೇಸರ ಸಂಕಟ ನಿವಾರಿಸಿ ಹೊಸ ಚೈತನ್ಯ ತುಂಬುತ್ತದೆ,ಸಂಗೀತವಿಲ್ಲದ ಜೀವನ ನೀರಸ.ಸಂಗೀತ ಆತ್ಮಕ್ಕೆ ಆಹಾರ ನೀಡುವ ಕಲೆ ದೇವತೆಗಳ ಭಾಷೆ ಎಂದರು.
ಬಾಕ್ಸ:ಸಂಗೀತವನ್ನು ಜನತೆ ಇಷ್ಟಪಡುತ್ತಾರೆ ಎನ್ನುವುದಕ್ಕೆ ಇಲ್ಲಿ ಸೇರಿದ ಅಪಾರ ಜನಸ್ತೋಮ ಸಾಕ್ಷಿಯಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರನ್ನ ವಿಚಾರ ವೇದಿಕೆಯ ಸದಸ್ಯರಾಗಿ ಕನ್ನಡ ನಾಡು ನುಡಿಯ ಸೇವೆ ಮಾಡಬೇಕು.........ಜಿ.ಎಸ್.ಗೊಂಬಿ ರನ್ನ ವಿಚಾರ ವೇದಿಕೆ ಮಹಾಲಿಂಗಪುರ.
ಇಂಪಾದ ಗಾಯನ:ಬೆಂಗಳೂರಿನ ಸಂಗೀತ ಕಲಾವಿದರಾದ ರಕ್ಷಿತ್ ಕುಲಕರ್ಣಿ,ವಿನಾಯಕ ಇನಾಮದಾರ ಹಾಗೂ ಶ್ರೇಯಶ್ರೀ ಇನಾಮದಾರ ಅವರ ಶಾಸ್ತ್ರೀಯ ಸಂಗೀತ ಗಾಯನ,ಭಾವಗೀತೆ,ಭಕ್ತಿಗೀತೆ ವಚನ ಗಾಯನ ಜನಮನಸೂರ್ಯಗೊಂಡವು.ವಿಜಯಪುರದ ವಿನಯ ಕುಲಕರ್ಣಿ ಅವರ ತಬಲಾ ವಾದನ ಹಾಗೂ ಈಚಲಕರಂಜಿಯ ತ್ರಿಗುಣ ಪೂಜಾರಿ ಅವರ ಹಾರ್ಮೋನಿಯಂ ವಾದನ ಸಂಗೀತಕ್ಕೆ ಮೆರಗು ನೀಡಿದವು. ಪ್ರೇಕ್ಷಕರು ಖುಶಿಗೊಂಡು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಹೊರಹಾಕಿದರು.
ರನ್ನ ವಿಚಾರ ವೇದಿಕೆ ಉಪಾಧ್ಯಕ್ಷ ಬಸವರಾಜ ಮೇಟಿ,ಮಾಧ್ಯಮ ಕಾರ್ಯದರ್ಶಿ ಎಸ್.ಎಸ್.ಈಶ್ವರಪ್ಪಗೋಳ,ಕೋಶಾಧ್ಯಕ್ಷ ಈರಣ್ಣ ಹಲಗತ್ತಿ,ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಗೊಂಬಿ,ಅಣ್ಣಾಜಿ ಫಡತಾರೆ,,ಶ್ರೀಶೈಲಪ್ಪ ಉಳ್ಳಾಗಡ್ಡಿ,ಗುರುಲಿಂಗ ಅಮ್ಮಣಗಿ,ದಾಕ್ಷಾಯಣಿ ಮಂಡಿ,ಅಕ್ಕೂತಾಯಿ ಕಿಚಡಿ,ಶಕುಂತಲಾ ತೇರದಾಳ,ಗಣ್ಯರಾದ ಲಕ್ಕಪ್ಪ ಚಮಕೇರಿ,ಎಂ,ಎಸ್,ಮುಗಳಖೋಡ ಮುಂತಾದವರು ಇದ್ದರು.
