ಮಹಾಲಿಂಗಪುರ : ಹಿಂದೂ ಧರ್ಮದಲ್ಲಿ ಶಿವನನ್ನು ಲಯಕರ್ತ್ಹ ಹಾಗೂ ಪರಮಾತ್ಮ, ಸೃಷ್ಟಿ, ಸ್ಥಿತಿ, ಲಯಗಳೆಂಬ ತ್ರಿವಿಧ ಕಾರ್ಯಗಳಲ್ಲಿ ವಿನಾಶ ಮತ್ತು ರೂಪಾಂತರದ ಪ್ರತೀಕ. ಆದಿಯೋಗಿಯಾಗಿ ಜ್ಞಾನದ ಮೂಲವಾಗಿ ಮತ್ತು ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿ ಶಿವನನ್ನು ಆರಾಧಿಸುವುದೇ ಶ್ರಾವಣ ಮಾಸದಲ್ಲಿ ಅತ್ಯಂತ ಶ್ರೇ?ವಾದುದು. ಭಕ್ತರಿಗೆ ಬೇಗನೆ ಒಲಿಯುವ ಏಕೈಕ ದೈವ ಎಂದರೆ ಶಿವನೊಬ್ಬನೇ ಎಂದು ಅಕ್ಕಲಕೋಟದ ?, ಬ್ರ, ಶ್ರೀ ಚಿಕ್ಕರಾಮಲಿಂಗ ಶಿವಶರಣ ಸ್ವಾಮಿಗಳು ಹೇಳಿದರು.
ಅವರು ನಗರದ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ ನಡೆದ ಶಿವನ ಮೂರ್ತಿ ಪ್ರತಿ?ಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಹಿಂದೂ ಧರ್ಮದಲ್ಲಿ ಅತ್ಯಂತ ಸರಳ ಹಾಗೂ ಶ್ರೇ?ವಾದ ಭಕ್ತಿ ಮಾರ್ಗವಾಗಿದೆ. ಶಿವನಿಗೆ ಅಥವಾ ಶಿವಲಿಂಗಕ್ಕೆ ಜಲ, ಬಿಲ್ವಪತ್ರೆ ಅರ್ಪಿಸಿ " ಓಂ ನಮಃ ಶಿವಾಯ " ಮಂತ್ರ ಜಪಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಶಿವನ ಅನುಗ್ರಹ ಸಿಗುತ್ತದೆ.
ಪರಶಿವನು ಉದಾರ ಮನಸ್ಸುಳ್ಳವನು ಹಾಗಾಗಿ ಶಿವನನ್ನು ಒಳಿಸಿಕೊಳ್ಳುಲು ಕಠಿಣ ಪರಿಶ್ರಮ ಬೇಕಾಗಿಲ್ಲ. ನಿರ್ಮಲ ಭಕ್ತಿಯೊಂದಿದ್ದರೆ ಸಾಕು . ಶಿವನ ಭಕ್ತನು ಭಕ್ತಿಯಿಂದ ಶಿವನನ್ನು ಭಕ್ತಿಯಿಂದ ನೆನೆದರೆ ಸಾಕು ಆತನ ಜೀವನ ಸುಖಮಯವಾಗುತ್ತದೆ. ಎಂದರು.
ಪ್ರಾಣ ಪ್ರತಿ?ಪನೆ : ಮರೆಗುದ್ದಿಯ ಪ, ಪೂ, ಶ್ರೀ ಡಾ, ನೀರುಪಾಧಿಶ್ವರ್ ಸ್ವಾಮೀಗಳು ಮೂರ್ತಿಗೆ ಪ್ರಾಣ ಪ್ರತಿ?ಪನೆ ಮಾಡಿ ಮೂರ್ತಿಯನ್ನು ಪ್ರತಿ?ಪನೆ ಮಾಡಿ.ಮಾತನಾಡಿ, ಶಿವನು ಸದಾ ಶಾಂತಚಿತ್ತನಾಗಿರುತ್ತಾನೆ. ಭಸ್ಮವನ್ನು ಹಚ್ಚಿಕೊಂಡು ವೈರಾಗ್ಯದ ಮೂರ್ತಿಯಂತೆ ಕಂಡರೂ, ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಿರುತ್ತಾನೆ. ಮಹಾಯೋಗಿ ಏನಿಸದರು.ವೈರಾಗ್ಯವಿಲ್ಲ.
ಶಿವ ದು? ಶಕ್ತಿಗಳನ್ನು ಎಂದೂ ಕ್ಷಮಿಸಿಲ್ಲ. ನ್ಯಾಯ ಅನ್ಯಾಯಗಳ ತೀರ್ಮಾನದಲ್ಲಿ ಶಿವನನ್ನು ಮೀರಿಸುವವರಿಲ್ಲ. ದೇವಾನು ದೇವತೆಗಳೆಲ್ಲಾ ಗೌರವಿಸುವಂತಹ ವ್ಯಕ್ತಿತ್ವ ತಣ್ಣದಾಗಿಸಿಕೊಂಡಿದ್ದ.ಕೆಲವು ಬಾರಿ ಕೋಪಗೊಂಡು ಅನಾಹುತಗಳಿಗೆ ಕಾರಣನಾದರೂ, ಅದನ್ನು ತಾನೇ ನಿಂತು ಸರಿಪಡಿಸಿದ.ನಾವು ಜೀವನದಲ್ಲಿ ಎ? ತಪ್ಪು ಮಾಡುತ್ತೇವೆ. ಅದನ್ನು ಒಪ್ಪಿಕೊಂಡು, ಅದನ್ನು ನಾವೇ ಸರಿಪಡಿಸಲು ಮುಂದಾಗಬೇಕು.ಅಂದಾಗ ಮಾತ್ರ್ ಜೀವನ ಸ್ವಾರ್ಥಕವಾಗುತ್ತದೆ. ಎಂದರು.
ವಿಶೇ? ಪೂಜೆ : ಮುಂಜಾನೆ ವಿಶೇ? ಅಲಂಕಾರ, ಹೋಮ,ಹವನ,ರುದ್ರಾಭಿ?ಕ,ಮಹಾ ಪೂಜೆ ನೆರವೇರಿಸಲಾಯಿತು.
ಭವ್ಯ ಮೆರವಣಿಗೆ : ನಗರದ ಶ್ರೀ ಸಿದ್ದಾರೂಢ ಆಶ್ರಮದಿಂದ ಮುಂಜಾನೆ ೯ ಗಂಟೆಗೆ ಪ ಪೂ ಸಹಜಾನಂದ್ ಮಹಾಸ್ವಾಮಿಗಳು ಪೂಜಿಸಿ ಚಾಲನೆ ನೀಡಿದರು.ಮೆರವಣಿಗೆ ಸಕಲ ಮಂಗಲ ವಾದ್ಯಗಳೊಂದಿಗೆ, ಮುತೈದೆಯರ ಕುಂಭ ಮೇಳ ಹಾಗೂ ಆರತಿಯೊಂದಿಗೆ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಬಂದು ಬನಶಂಕರಿ ದೇವಸ್ಥಾನ ತಲುಪಿತು. ಮಹಾ ಪೂಜೆಯೊಂದಿಗೆ ಮಹಾಪ್ರಸಾದ ಜರುಗಿತು.
ಈ ಸಂಧರ್ಭದಲ್ಲಿ ಮುಖಾಂಡರಾದ ನಗರ ಘಟಕದ ಬಿಜೆಪಿ ಅಧ್ಯಕ್ಷರಾದ ಶಂಕರಗೌಡ ಪಾಟೀಲ,ಕೃ?ಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಮನೋಹರ ಶಿರೊಳ, ಶ್ರೀಶೈಲಪ್ಪ ಉಲ್ಲೆಗಡ್ಡಿ,ಮಲ್ಲಪ್ಪ ಭಾವಿಕಟ್ಟಿ, ಸಿದ್ದಗಿರಿ ಕಾಗಿ, ಬಿ ಡಿ ಸೊರಗಾವಿ,ಲಕ್ಕಪ್ಪ ಚಮಕೇರಿ, ಸಂಗಪ್ಪ ಹಲ್ಲಿ, ಮಲ್ಲು ಕುಳ್ಳೊಳ್ಳಿ, ಜಿ ಎಸ್ ಗೊಂಬಿ, ಮಹಾಲಿಂಗಪ್ಪ ಲಾತುರ, ರಾಜೇಶ ಭಾವಿಕಟ್ಟಿ, ಶಂಕರ ಅಂಬಿ, ಶ್ರೀಶೈಲ್ ಬಾಡನವರ, ಶಿವಲಿಂಗ್ ಟಿರ್ಕಿ,ರಾಜು ಚಮಕೇರಿ ಪ್ರಭು ಬೆಳಗಲಿ, ಸತೀಶ್ ಸೊರಗಾವಿ, ಸುನಿಲ್ ಜಮಖಂಡಿ, ಸಂಜು ಜಮಖಂಡಿ, ವಾರದಾನೆಪ್ಪ ಭಾವಿಕಟ್ಟಿ, ಶಿವಾನಂದ ಕಿತ್ತೂರ್, ಗುರುಪಾದ ಅಂಬಿ,ಶ್ರೀಶೈಲ್ ನುಚ್ಚಿ, ಸುಭಾಸ್ ಭಾವಿಕಟ್ಟಿ, ಸಿದ್ದಾರೂಢ ಮುಗಳಖೊಡ, ಹುಮಾಯಿನ ಸುತಾರ,ಕಾರ್ಯಕ್ರಮವನ್ನು ಬಿ ಸಿ ಪೂಜಾರಿ ನಿರೂಪಿಸಿ ವಂದಿಸಿದರು.