Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಕರ್ತೆ ನೀರೂಶರ್ಮಾ ಈಗ ಬಾಂದ್ರ ಬಾಯ್ ಸಿನಿಮಾ ನಿರ್ದೇಶಕಿ

ಬಾಲಿವುಡ್ ಅಂಗಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಕತೆಯಾಗಿ ಗುರುತಿಸಿಕೊಂಡಿರುವ ನೀರೂಶರ್ಮಾ ಹೊಸ ಅನುಭವ ಎನ್ನುವಂತೆ *’ಬಾಂದ್ರ ಬಾಯ್’* ಇಪ್ಪತ್ತೊಂದು ನಿಮಿಷದ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 

news_1783060417_0_505.webp

     ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಒಡೆತನದ ವಿಸ್ಟಿಂಗ್‌ವುಡ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿ, ನಂತರ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ಶ್ರಮಕ್ಕೆ ರಾಜೀವ್ ಪರಾಶರ್ ಕ್ರ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.

Advertisement

ಶೀರ್ಷಿಕೆಗೆ ’ಕ್ರೂರ,ಕಹಿ, ಪಕ್ಷಪಾತ’ ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿದೆ.

      ಇಂದಿನ ಡಿಜಿಟಲ್ ಯುಗದಲ್ಲಿ ಬಲವಾಗಿ ಪ್ರತಿಧ್ವನಿಸುವ ವಿಷಯಗಳನ್ನು ಚಿತ್ರಕತೆಯಲ್ಲಿ ಬಳಸಿಕೊಂಡಿದ್ದಾರೆ. ಮಾಧ್ಯಮ, ಅಧಿಕಾರ ಮತ್ತು ಸಾಮಾಜಿಕ ತೀರ್ಪಿನ ನಡುವಿನ ಸಂಕೀರ್ಣ ಸಂಬಂಧಗಳನ್ನು ಅನ್ವೇಷಿಸುತ್ತದೆ. ಸತ್ಯಗಳು ಹೊರಹೊಮ್ಮುವ ಮೊದಲು ನಿರೂಪಣೆಗಳು ಹೇಗೆ ರಚಿಸ್ಪಡುತ್ತವೆ. ಇಂತಹ ಸತ್ಯಗಳು ಎಷ್ಟು ಸುಲಭವಾಗಿ ಮೀರಿಸಬಹುದು ಎಂದು ನೋಡುಗರನ್ನು ಪ್ರಶ್ನಿಸುವಂತೆ ಮಾಡುತ್ತದೆ.

news_1783060417_1_159.webp

      ಮ್ಯೂಸಿಕ್ ಆಲ್ಬಂ,ದೂರದರ್ಶನ, ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಹೆಸರು ಮಾಡಿರುವ ಆಹ್ವಾನ್‌ಕುಮಾರ್ ಹಾಗೂ ಗುಜರಾತಿ ಮತ್ತು ಮರಾಠಿ ಭಾಷೆಯ ಖ್ಯಾತ ನಟ ಧರ್ಮೇಂದ್ರ ಗೋಹಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಲೋಚನ್ ಬರ್ಸಗಡೆ, ಯಶ್ ಪಡ್ನೇಕರ್, ಶಾಮ್‌ಥೋಬರೆ, ಪವನ್ ತಿವಾರಿ, ಐಶ್ವರ್ಯ ಮನೋಹರ್, ಹಿಮಾಂಶಿ ಮಂಡಾಲಿಯ, ನಂದಿನಿಶರ್ಮಾ ಮುಂತಾದವರು ನಟಿಸಿದ್ದಾರೆ.

     ಸಂಗೀತ ಮಹಾವೀರ್ ಕೌಶಲ್, ಛಾಯಾಗ್ರಹಣ ಆಯುಷ್ ಷಾ, ಸಂಕಲನ ಸಂದೀಪ್ ಕುರ್ರಪ್ ಚಿತ್ರಕ್ಕಿದೆ. ’ಬಾಂದ್ರ ಬಾಯ್’ ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಮುಂಬರುವ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಲ್ಲಿಕೆಯಾಗಿದ್ದು, ತನ್ನ ಉತ್ಸವದ ಪ್ರಯಾಣವನ್ನು ಶುರು ಮಾಡಿದೆ.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಲತವಾಡದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಬಿಜೆಪಿ ಮುಖಂಡರಿಂದ ಮನವಿಮತದಾರರ ಪಟ್ಟಿ ಪರಿಷ್ಕರಣೆಗೆ ಸಹಾಯವಾಣಿ ಕೇಂದ್ರಗಳ ಸ್ಥಾಪನೆ - ಎಸಿ"ಧಾರ್ಮಿಕ ಆಚರಣೆಗಳಿಂದ ಮಾತ್ರ ಮನಸ್ಸಿನ ನೆಮ್ಮದಿ ಶಾಂತಿ ದೊರಕುತ್ತದೆ"ಬಸ್ ನಿಲ್ದಾಣದ ಗುಂಡಿ ಮುಚ್ಚಲು ಆಗ್ರಹಸ್ವ  ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ.22 ವರ್ಷದ ಸೇನೆಯ ಸೇವೆ ಹೆಮ್ಮೆ ತಂದಿದೆ :ರಮೇಶ ನೀರಲಗಿ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಮಳೆಗಾಲದಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಅಧಿಕಾರಿಗಳಿಗೆ ಸೂಚನೆ ಜುಲೈ 29ರೊಳಗೆ ಮತದಾರರ ವಿವರ ದೃಢೀಕರಿಸಿ: ಶಾಸಕ ಲಕ್ಷ್ಮಣ ಸವದಿಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯಕರ್ತವ್ಯ :ಡಾ. ಪ್ರಕಾಶ ಹಳ್ಯಾಳ