ಜಮಖಂಡಿ ;ತಾಲುಕಿನ ಹಿಪ್ಪರಗಿ ಗ್ರಾಮದಲ್ಲಿ ಕಳೆದ ತಿಂಗಳು ಜುಲೈ 25ರ ರಾತ್ರಿ 10.45ರ ಸುಮಾರಿಗೆ ಸಂಭವಿಸಿದ್ದ ಕಾರ್ ಸ್ಪೋಟ್ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಾಗಲಕೊಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೊಯಲ್ ತಿಳಿಸಿದ್ದಾರೆ, ಮಂಗಳವಾರ ನಗರದ ಗ್ರಾಮೀಣಠಾಣೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು, ಭೂಮಿ ವಿವಾದಕ್ಕೆ ಸಂಬಂಧಿಸಿ ದಂತೆ ಬಾರ್ ಮಾಲಿಕ ಸಂತ್ರಸ್ತ ಹಣಮಂತ ಅಥಣಿ ಎಂಬುವರಿಗೆ ಬೆದರಿಕೆ ಹಾಕಲು ಹಾಗೂ ಕೊಲೆಮಾಡುವ ದುರುದ್ದೇಶ ದಿಂದ ಕಾರ್ನ್ನು ಸ್ಪೋಟಿಸಲಾಗಿತ್ತು. ಪ್ರಕರಣದ ರೂವಾರಿಗಳು ಆರೋಪಿತರಾದ ಶಿವಾನಂದ ಜಲ್ಲಿ, ರೇವಣಪ್ಪ ಜಲ್ಲಿ, ಮಹದೇವ ಸಂಗಾಪೂರ, ಮಲ್ಲಿಕಾರ್ಜುನ ಭದ್ರಪನವರ, ಎಂಬುರನ್ನು ಬಂಧಿಸಲಾಗಿದ. ಸ್ಪೋಟಕ ವಸ್ತು ಪೂರೈಸಿದ ಆರೋಪಿ ಗಜಾನನ ಸಂಗಾಪುರ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.
ಪೊಲೀಸ್ ತಂಡ; ಕಾರ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ಜಗದೀಶ, ಡಿವೈಎಸ್ಪಿ ಸೈಯದ್ ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಗಂಗಾಧರ ಪೂಜೇರಿ, ಶಿವಾನಂದ ಶಿರಗಣ್ಣವರ, ನಿತೀನ ಕುಮಾರ, ಅಪ್ಪಣ್ಣ ಐಗಳಿ ಹಾಗೂ ಸೊಕೊ ಶ್ರೀಧರ ಮಗದುಮ ನೇತೃತ್ವದ 4 ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ. ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ನಾಲ್ಕು ತಂಡದ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ಪ್ರಶಂಸಾ ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ತನಿಖೆ ಪ್ರಗತಿ : ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿರುವ ಹಾಗೂ ಸಹಕಾರ ನೀಡಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಅವರ ಪಾತ್ರಕ್ಕೆ ಅನುಗುಣವಾಗಿ ಪ್ರತಿಯೊಬ್ಬರನ್ನು ಪತ್ತೆ ಹಚ್ಚುವ ಕೆಲಸ ಪ್ರಗತಿಯಲ್ಲಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಾಧಾರ ಗಳಿಂದ ದೃಢ ಪಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಹೇಳಿದರು. ಎಎಸ್ಪಿ ಜಗದೀಶ, ಡಿವೈಎಸ್ಪಿ ಸೈಯದ್ ರೋಷನ್ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ ಪಿಎಸ್ಐಗಳಾದ ಗಂಗಾಧರ ಪೂಜೇರಿ, ಶಿವಾನಂದ ಶಿರಗಣ್ಣವರ, ನಿತೀನ ಕುಮಾರ, ಅಪ್ಪಣ್ಣ ಐಗಳಿ ಹಾಗೂ ಸೊಕೊ ಶ್ರೀಧರ ಮಗದುಮ ಹಾಗೂ ಸಿಬ್ಬಂದಿ ಇದ್ದರು.