ಬೀಳಗಿ- ಇಲ್ಲಿನ ಪ್ರತಿಷ್ಠಿತ ಗುರುಸಿದ್ದೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ 21 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ದಿ 20 ರಂದು ಭಾನುವಾರ 11 ಗಂಟೆಗೆ ಪಟ್ಟಣದ ಶ್ರೀ ಕಲ್ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀಶೈಲ ಯಂಕಂಚಿಮಠ ತಿಳಿಸಿದರು.
ಬ್ಯಾಂಕಿನ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ೨೧ ವರ್ಷಗಳಿಂದ ಸಂಘವು ರೈತರು,ವ್ಯಾಪಾರಸ್ಥರು, ಸಣ್ಣ ಪುಟ್ಟ ಉದ್ಯೋಗಿಗಳಿಗೆ ಸಾಲ ವಿತರಿಸಿ ಎಲ್ಲಾ ಜನರ ಆರ್ಥಿಕ ಶಕ್ತಿ ಬೆಳೆಸುವ ಕಾರ್ಯ ಮಾಡುತ್ತ ಬಂದಿದ್ದು, ಗ್ರಾಹಕರು, ಷೇರುದಾರರು ಮತ್ತು ಸರ್ವ ಸದಸ್ಯರ ಸಹಕಾರದಿಂದ, ಸಂಘದ ಆಡಳಿತ ಮಂಡಳಿ, ಸಿಬ್ಬಂದಿಯ ಪ್ರಾಮಾಣಿಕ ಕೆಲಸದಿಂದ ಸಂಘವು ಬೆಳೆದು ನಿಲ್ಲಲು ಕಾರಣವಾಗಿದ್ದು ಸಂಘವು ಪ್ರಸಕ್ತ ಸಾಲಿನಲ್ಲಿ 1.20 ಕೋಟಿ ನಿವ್ವಳ ಲಾಭಗಳಿಸಿದೆ,ಜೊತೆಗೆ ಎಲ್ಲಾ ಜನರ,ಆಡಳಿತ ಮಂಡಳಿ ತಿರ್ಮಾನದಂತೆ ಸದ್ಯ ಬಾಗಲಕೋಟೆ,ಗಲಗಲಿ ಮತ್ತು ಮುಧೋಳ ಪಟ್ಟಣಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದ್ದು ಬರುವ ದಿನಮಾನಗಳಲ್ಲಿ ಕೆರೂರ, ವಿಜಯಪುರ ನಗರದಲ್ಲಿ ತನ್ನ ಶಾಖೆ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ,ದಿ 20 ರಂದು ಜರುಗುವ ಸಭೆಗೆ ಸಂಘದ ಸರ್ವ ಸದಸ್ಯರು, ಹಿತೈಷಿಗಳು,ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಕೆಂಪಯ್ಯ ವಿರಕ್ತಮಠ, ನಿರ್ದೇಶಕರಾದ ಎಸ್ ಎಚ್ ಯಾಳವಾರಮಠ,ಎಸ್ ಆಯ್ ಗೋಠೆ,ಆಯ್ ಎಸ್ ಬಂಗಾರಿಮಠ, ಎನ್ ಎಸ್ ಹಿರೇಮಠ,ಎಸ್ ಸಿ ಹಿರೇಮಠ,ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಪಂಚಾಕ್ಷರಿ ಹಿರೇಮಠ,ಇದ್ದರು.