ಹಸಿರು ಕ್ರಾಂತಿ ವರದಿ ಬೆಳಗಾವಿ
ರೋಟರಿ ಕ್ಲಬ್ ಆಫ್ ಬೆಳಗಾವಿ ನಾರ್ಥ್ನ ಸೇವಾ ಸರ್ವೋಪರಿ ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವ ಅಭಿಯಾನ ಜಾರಿಗೊಳಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿತು. ಮಣ್ಣಿನ ಮೂರ್ತಿಗಳನ್ನು ಮಾತ್ರ ಬಳಸಿ, ಪಿಒಪಿ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ತಿರಸ್ಕರಿಸಿ, ನೈಸರ್ಗಿಕ ಮತ್ತು ನೀರಿನಲ್ಲಿ ಕರಗುವ ಬಣ್ಣಗಳನ್ನು ಬಳಸಿ, ಪಾಲಿಕೆಯ ಕೃತಕ ಕೆರೆಗಳಲ್ಲಿ ಮಾತ್ರ ವಿಸರ್ಜಿಸಿ, ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್ ಅಲಂಕಾರವನ್ನು ತಪ್ಪಿಸಿ, ಹೆಚ್ಚು ವಿದ್ಯುತ್ ಬಳಸುವ ದೀಪಗಳ ಬದಲು ಎಲ್ಇಡಿ ದೀಪಗಳನ್ನು ಬಳಸಿ, ರಾತ್ರಿ 10ರ ನಂತರ ಲೌಡ್ ಸ್ಪೀಕರ್ ಬಳಸಬೇಡಿ, ಬಪ್ಪಾ ಜೊತೆ ಒಂದು ಗಿಡ ನೆಡಿ, ನಿರ್ಮಾಲ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ, ಹೌಸಿಂಗ್ ಸೊಸೈಟಿ ಮತ್ತು ಮಂಡಳಿಗಳಲ್ಲಿ ಜಾಗೃತಿ ಮೂಡಿಸಿ ಎಂದು ಮನವಿಯಲ್ಲಿ ತಿಳಿಸಿದರು. ಜಿಲ್ಲಾಧಿಕಾರಿಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಪದಾಧಿಕಾರಿಗಳಾದ ಕಾರ್ಯಕ್ರಮ ಅಧ್ಯಕ್ಷ ವಿಕಾಸ್ ಗಡವಿ, ಕಾರ್ಯಕ್ರಮ ಕಾರ್ಯದರ್ಶಿ ಮಂಗೇಶ್ ಕಾಂತಕ್, ಅಧ್ಯಕ್ಷ ಪಿ.ಡಿ.ಧೋತ್ರೆ, ಕಾರ್ಯದರ್ಶಿ ಡಾ.ಸುಭಾಷ್ ಪಾಟೀಲ ಇದ್ದರು.
ನಗರದ ವಿವಿಧ ಸ್ಥಳಗಳಲ್ಲಿ ಮಣ್ಣಿನ ಮೂರ್ತಿಗಳು ಲಭ್ಯ
1. ಬಾಮಣೆ ಟವರ್, ಗೋವ್ಸ್ ರಸ್ತೆ, ಫೈರ್ ಬ್ರಿಗೇಡ್ ಸ್ಟೇಷನ್ ಎದುರು. ಮೊ.ಮಂಗೇಶ್ ಕಾಂತಕ್ ಮೊ.9449650184
2. ಕುಮಾರಸ್ವಾಮಿ ಲೇಔಟ್, ಶಿವಾಲಯ - ಸೂರಜ್ ಓಝಾ ಮೊ.9739027775
3. ಭಾಗ್ಯನಗರ, 2ನೇ ಕ್ರಾಸ್-ದುರ್ಗೇಶ್ ಹರಿತೆ ಮೊ. 9448142606
4. ಕಿರ್ಲೋಸ್ಕರ್ ರಸ್ತೆ -ಪಿ.ಡಿ.ಧೋತ್ರೆ / ವಿಶ್ವಾಸ್ ಮೊ.9448963939 / 9035544260
5. ಕಿರ್ಲೋಸ್ಕರ್ ರಸ್ತೆ -ಪಿ.ಡಿ. ಧೋತ್ರೆ - ಮೊ.9448963939
6. ಖಾಸಬಾಗ್- ಪಿ.ಡಿ.ಧೋತ್ರೆ ಮೊ.9448963939
7. ಶಿವಬಸವ ನಗರ-ವಿಕಾಸ್ ಗಡವಿ ಮೊ.7975203087
8. ತಿಲಕವಾಡಿ- ರವಿ ಕಲಾನಾವರ್ ಮೊ.9483108101
9. ವಿಜಯ ನಗರ 2ನೇ ಬಸ್ ನಿಲ್ದಾಣ-ಸಾಗರ್ ಕೋಳಿ ಮೊ.9743409511
10. ಮಾಂಡೋಳಿ ರಸ್ತೆ-ಸಿದ್ಧಾರ್ಥ್ ಮೊ.7090786501