LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬಳ್ಳಾರಿಯ ನಾಗೇಂದ್ರ ನಿವಾಸದಲ್ಲಿ ಮುಂದಿವರೆದ ಇಡಿ ಶೋಧ


ಬಳ್ಳಾರಿ : ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರ ಬಳ್ಳಾರಿಯ ನೆಹರು ಕಾಲೋನಿಯ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಿಆರ್ಪಿಎಫ್ ಯೋಧರ ಮೂಲಕ ಬೆಂಗಳೂರಿನಿಂದ ಬಂದ ಇಡಿ ಅಧಿಕಾರಿಗಳ ತಂಡ, ನಾಗೇಂದ್ರ ಅವರ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿದೆ. ದಾಳಿ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೇ ಅಧಿಕಾರಿಗಳ ತಂಡ ಬಳ್ಳಾರಿಗೆ ಬಂದು ನಾಗೇಂದ್ರ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಮುಂದಿವರೆಸಿದೆ.


ಬೆಳಗ್ಗೆ 7 ಗಂಟೆಗೆ ನಾಗೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸತತ 8 ಗಂಟೆಗಳಿಂದ ನಿರಂತರ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮಾಜಿ ಸಚಿವ ನಾಗೇಂದ್ರ ಕುಟುಂಬಸ್ಥರು ಯಾರೂ ಮನೆಯಲ್ಲಿ ಇಲ್ಲದ ಕಾರಣ ಕೆಲಸಗಾರರು ಹಾಗೂ ಸಹಾಯಕರ ವಿಚಾರಣೆ ನಡೆಯುತ್ತಿದೆ.

 ಇಡಿ ಅಧಿಕಾರಿಗಳ ತಂಡ ಶೋಧಕಾರ್ಯವನ್ನ ತೀವ್ರಗೊಳಿಸಿದ್ದು, 3-4 ಜನರ ಒಂದು ತಂಡ ನಾಗೇಂದ್ರ ಅವರ ಮನೆಯಲ್ಲಿ ಪರಿಶೀಲಿಸುತ್ತಿದ್ದರೆ ಇನ್ನೊಂದು ವಾಹನದಲ್ಲಿ ಇಡಿ ಅಧಿಕಾರಿಗಳು ನಾಗೇಂದ್ರ ಅವರ ಆಪ್ತರ ಮನೆ ಹುಡುಕುತ್ತಿದ್ದಾರೆ. ನಾಗೇಂದ್ರ ಅವರ ಸರಕಾರಿ ಆಪ್ತ ಸಹಾಯಕ ಚೇತನ್ ನೆರವಿನೊಂದಿಗೆ ಇಡಿ ಅಧಿಕಾರಿಗಳು ಕಂಪ್ಯೂಟರ್ ಪರಿಶೀಲನೆ ಮಾಡುತ್ತಿದ್ದಾರೆ.


 ನಾಗೇಂದ್ರ ಮನೆಯಲ್ಲಿ ಇಡಿ ಅಧಿಕಾರಿಗಳ ದಾಳೆ ವೇಳೆ ಮಹತ್ವದ ಆಸ್ತಿ ದಾಖಲೆಗಳು ದೊರೆತಿವೆ. ಇದೀಗ ಕಂಪ್ಯೂಟರ್ ಡಾಟಾ ಶೋಧಕ್ಕೆ ಮುಂದಾಗಿರುವ ಇಡಿ ತಂಡ ವಾಲ್ಮೀಕಿ ನಿಗಮದ ಹಗರಣದ ಬಳಿಕ ಆಸ್ತಿ ಖರೀದಿ ಆಗಿದೆಯೆಂದು ಪರಿಶೀಲನೆ ನಡೆಸುತ್ತಿದೆ. ಆಸ್ತಿ ಪತ್ರಗಳು ದೊರೆತ ಬೆನ್ನಲ್ಲೇ ಶೋಧ ಕಾರ್ಯ ಚುರುಕುಗೊಂಡಿದೆ. ಮನೆ ಕೆಲಸಗಾರರು, ಆಪ್ತರಿಂದಲೂ ಮಾಹಿತಿ ಸಂಗ್ರಹಿಸುತ್ತಿರುವ ಇಡಿ ಹೈದ್ರಾಬಾದ್ ಟು ಬಳ್ಳಾರಿ ಅಕೌಂಟ್ ಲಿಂಕ್ ನ್ನು ಪರಿಶೀಲನೆ ಜೊತೆಗೆ ಆಸ್ತಿ ಪತ್ರಗಳ ಮೂಲ ಕೆದಕುತ್ತಿದೆ ಎಂದು ತಿಳಿದು ಬಂದಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್