LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ  : ವಿ.ಕೆ.ಬಸಪ್ಪ 

ಬಳ್ಳಾರಿ. ಸೆ. 10:: ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕೀಹೊಳಿ ಅವರ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿರುವುದು ಬಿಜೆಪಿಯ ಕುತಂತ್ರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು  ಕಾಂಗ್ರೆಸ್ ಮುಖಂಡ ವಿ.ಕೆ.ಬಸಪ್ಪ ಆರೋಪಿಸಿದ್ದಾರೆ. 
 ಈ ಕುರಿತು  ಪತ್ರಿಕಾ ಹೇಳಿಕೆಯನ್ನು ನೀಡಿರುವ ವಿಕೆ ಬಸಪ್ಪ, ಬಿಜೆಪಿಯ  ಕೇಂದ್ರ ಗೃಹ ಸಚಿವ  ಅಮಿತ್ ಶಾ ಅವರು ನೇರವಾಗಿ ಚುನಾವಣೆ ಎದುರಿಸದೆ ಹೀಗೆ  ಅಡ್ಡ ದಾರಿ ಹಿಡಿದು  ಕರ್ನಾಟಕದಲ್ಲಿ ಕೇವಲ ಎಸ್ಸಿ, ಎಸ್ಟಿ  ನಾಯಕರನ್ನು ಟಾರ್ಗೆಟ್ ಮಾಡಿ ಇಡಿ, ಸಿಬಿಐ ಛೂ ಬಿಡುತ್ತಿದ್ದಾರೆ,   ರಾಜ್ಯದಲ್ಲಿ ಜೋಡೆತ್ತುಗಳಂತೆ  ಇರುವ  ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್  ಮತ್ತು  ಸತೀಶ್  ಜಾರಕೀಹೊಳಿ ಅವರ ನೇತೃತ್ವದಲ್ಲಿ 2028 ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ  ಅಧಿಕಾರ ಬರುತ್ತೆ ಅಂತಾ  ಅಧಿಕಾರ ದುರ್ಧಾಬಳಕೆ ಮಾಡಿಕೊಂಡು  ಬಿಜೆಪಿ ದಾಳಿ ನಡೆಸುತ್ತಿದೆ ಇದು ಸರಿಯಲ್ಲ. 
ಬಿ. ಜೆ. ಪಿ ಯ ಷಡ್ಯಂತ್ರ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ನಮ್ಮ ವಾಲ್ಮೀಕಿ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ವಾಲ್ಮೀಕಿ ಜನಾಂಗದ ನಾಯಕರಾದ  ನಾಗೇಂದ್ರ,  ಕೆ ಏನ್ ರಾಜಣ್ಣ, ಈಗ  ಸತೀಶ್ ಅಣ್ಣಾ 
ಅಲ್ಲದೆ ಬಿಜೆಪಿ ಪಕ್ಷದ ನಾಯಕರಾದ  ರಾಮುಲು,  ಸಣ್ಣ ಪಕ್ಕೀರಪ್ಪ,ಟಿ ಎಚ್ ಸುರೇಶ ಬಾಬು,  ರಾಜು ಗೌಡ ಇನ್ನು ಅನೇಕ ನಾಯಕರು  ಬಿಜೆಪಿ ಕುತಂತ್ರದಿಂದ ಸೋಲಬೇಕಾಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಸತೀಶ್ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮೀ ಹೆಬ್ಬಾಳಕರ್*ಅ.12ರಂದು ಅದ್ಧೂರಿಯಾಗಿ ಅಥಣಿ ತಾಲೂಕಿನ  ನಾಗನೂರ ಪಿ.ಕೆ. ಸರ್ಕಾರಿ ಶಾಲೆಗೆ ಶತಮಾನೋತ್ಸವ ಸಂಭ್ರಮ : ಸಚಿವ ಸವದಿ ಅವರೊಂದಿಗೆ ಪೂರ್ವಭಾವಿ ಚರ್ಚೆಸಚಿವ  ಸತೀಶ ಜಾರಕಿಹೋಳಿ ವಿರುದ್ದ ವ್ಯವಸ್ಥಿತ ಷಡ್ಯಂತ್ರವಾಗಿದೆ : ಸುಜಾತಾ ಬೇಟೆಗಾರ.*ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಜಿಲ್ಲೆಯ ಮುಖಂಡರು ಭಾಗಿ*ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ  : ವಿ.ಕೆ.ಬಸಪ್ಪ ಭೋವಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಆಗ್ರಹ | ಅ.11ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ನೆರವು: ಶಿವಸಂಜೀವಿನಿ ಸುರಗಿರಿ ವತಿಯಿಂದ ಸಹಾಯಧನ ವಿತರಣೆಸಿರುಗುಪ್ಪದಲ್ಲಿ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ: ಗಡಿನಾಡ ಕನ್ನಡಿಗರ ಸವಾಲು ಮತ್ತು ನಾಡು-ನುಡಿ ರಕ್ಷಣೆಗೆ ಕರೆಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ  ಭಾಜನರಾದ ನಬಿಸಾಬ ಕುದ್ದುನ್ನವರಗಣೇಶೋತ್ಸವದಲ್ಲಿ ಹಳೆ ಸಂಪ್ರದಾಯಕ್ಕೆ ಮರುಜೀವ ನೀಡಿ: ಪಿಎಸ್‌ಐ ಪ್ರೀತಮ್ ನಾಯಕ