ಯರಗಟ್ಟಿ,ಜು,೦೩: ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ ಎಮ್.ವಿ.ಗುಂಡಪ್ಪಗೋಳ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಕಂದಾಯ, ವೈದ್ಯರ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಕಣ್ಣು ಮತ್ತು ಕಿವಿಯಾಗಿದ್ದು, ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಸುದ್ದಿಗಳ ಪ್ರಸಾರದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಆದ್ಯತೆ ಇರಬೇಕು ಎಂದು ಹೇಳಿದರು.
ಚುನಾವಣೆ ಇಲಾಖೆ ಶೀರಸ್ತುದಾರ ಎಸ್.ಬಿ.ಕುಲಕರ್ಣಿ ಮಾತನಾಡಿ, ಪತ್ರಕರ್ತರು ರಾಜಕೀಯ, ಆರ್ಥಿಕ ಅಥವಾ ವೈಯಕ್ತಿಕ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ಮಾತ್ರ ಸಮಾಜದಲ್ಲಿ ಮಾಧ್ಯಮಗಳ ಮೇಲಿನ ವಿಶ್ವಾಸ ಉಳಿಯುತ್ತದೆ ಎಂದರು. ತಹಶೀಲ್ದಾರ ಎಮ್.ವಿ.ಗುಂಡಪ್ಪಗೋಳ, ವೈದ್ಯರು ಡಾ.ಸಚೀನ ಉಪ್ಪಿನ, ಡಾ.ವಿಜಯ ಬೆನಕಟ್ಟಿ ಹಾಗೂ ಪತ್ರಕರ್ತರು ಶಿವಾನಂದ ಬಳಿಗಾರ, ಕೆ.ಎಫ್.ನದಾಪ, ಈರಣ್ಣ ಹೂಲ್ಲೂರ, ರವಿಕುಮಾರ ಅಣ್ಣಿಗೇರಿ, ಫಿರೋಜ ಖಾದ್ರಿ, ಶಶಿಧರ ಪಾಟೀಲ, ಬಸವರಾಜ ದಳವಾಯಿ, ಮಹಾಂತೇಶ ಗಿಲಾಕಿ, ಜಗದೀಶ ಕೌಜಲಗಿ, ಮಲ್ಲೇಶ ದಳವಾಯಿ, ಪ್ರದೀಪ ಮಠಪತಿ ಅವರನ್ನು ಸನ್ಮಾನಿಸಿದರು.
ಗ್ರಾಮ ಆಡಳಿತಾಧಿಕಾರಿ ಎಲ್.ಬಿ.ದಳವಾಯಿ, ಯಲ್ಲಪ್ಪ ಬಾಂಗಿ, ಕೆ.ಎಂ.ಗಡಕರಿ, ಸ್ವರೂಪ ಹಪ್ಪಳಿ, ಲಖನ್ ಪೂಜೇರಿ, ವಿಜಯ ಉಪ್ಪಿನ, ರಾಜು ಜೀವಾಪೂರ, ಮಂಜು ಬಡಿಗೇರ, ರವಿ ತಳವಾರ, ಎಲ್.ಸಿ.ತಳವಾರ ಹಾಗೂ ಸಿಬ್ಬಂದಿ, ಪತ್ರಕರ್ತರು ಇದ್ದರು.
