ಬೀಳಗಿ- ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ವನ್ನು ಖಂಡಿಸಿ ಎನ್.ಎಸ್.ಯು.ಐ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಕೇಂದ್ರ ಸರ್ಕಾರವು ವಿದ್ಯಾರ್ಥಿ ಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಪ್ರದಾನಿ ಮೋದಿ ಹಾಗೂ ಬಿಜೆಪಿ ಸರ್ಕಾರ ಇದಕ್ಕೆ ತಕ್ಕ ಪರಿಣಾಮ ಎದುರಿಸಲಿದೆ ಎಂದು ಎನ್. ಎಸ್. ಯು. ಐ ತಾಲ್ಲೂಕಾ ಅಧ್ಯಕ್ಷ ವಿಜಯಕುಮಾರ ತಿಪರೆಡ್ಡಿ ಹೇಳಿದರು.
ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗದ ಸಂಚಾಲಕ ಮಹಾದೇವ ಹಾದಿಮನಿ ಮಾತನಾಡಿ, ಹೋರಾಟ ಮಾಡುವ ವಿದ್ಯಾರ್ಥಿ ಸಮುದಾಯವನ್ನು ಮತ್ತು ಈ ಸಮುದಾಯಕ್ಕೆ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕರನ್ನು ಬಂಧನ ಮಾಡುವ ಮೂಲಕ ಹೋರಾಟಗಾರರ
ಆತ್ಮ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ
ತಾಲ್ಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಮಾತನಾಡಿದರು.
ನವೀನ ಢವಳೇಶ್ವರ,ನಾಗರಾಜ ಶಿಡ್ಲೆನ್ನವರ,ಯಲ್ಲಪ್ಪ ಸಂಶಿ ,ಭೀಮಶಿ ಬಂಡಿವಡ್ಡರ,ಹುಸನಪ್ಪ ಹಾದಿಮನಿ, ಪಡಿಯಪ್ಪ ವಾಬಣ್ಣವರ,ವಿಠ್ಠಲ ಕಂಬಾರ,ಮಂಜು ಕಣಬೂರ ಇದ್ದರು.
