ಧಾರವಾಡ: ಧಾರವಾಡದ ಕೆಲಗೇರಿ ಹಿಂಭಾಗದಲ್ಲಿರುವ ಚಾಲುಕ್ಯನಗರಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಅಲ್ಲಿನ ಜನ ಅಧಿಕಾರಿಗಳಿಗೆ ವಿನಂತಿಸಿದ್ದರೂ ಅಧಿಕಾರಿಗಳು ಮಾತ್ರ ಬಸ್ ಸೌಕರ್ಯ ನೀಡಿರಲಿಲ್ಲ.
ಇದೇ ವಿಷಯವನ್ನು ಚಾಲುಕ್ಯನಗರದ ನಿವಾಸಿಗಳು ಕಾಂಗ್ರೆಸ್ನ ಹಿರಿಯ ಮುಖಂಡ ದೀಪಕ ಚಿಂಚೋರೆ ಅವರಿಗೆ ತಿಳಿಸಿದಾಗ ಚಿಂಚೋರೆ ಅವರು ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚಾಲುಕ್ಯನಗರಕ್ಕೆ ಬಸ್ ವ್ಯವಸ್ಥೆ ಮಾಡಿಸಿದ್ದಾರೆ.
ಈ ಬಸ್ ವ್ಯವಸ್ಥೆ ಆದ ಮೇಲೆ ಶಾಸಕ ಅರವಿಂದ ಬೆಲ್ಲದ ಅವರು ಆ ಬಸ್ ತಾವೇ ಉದ್ಘಾಟಿಸುವುದಾಗಿ ಹೇಳಿದ್ದರಂತೆ. ಅಧಿಕಾರಿಗಳು ಆ ಬಸ್ಗೆ ಬೆಲ್ಲದ ಅವರ ಸಲಹೆಯಂತೆ ಆತ್ಮಶ್ರೀ ನಗರದ ಬಸ್ ಎಂದು ಬೋರ್ಡ್ ಕೂಡ ಹಾಕಿಸಿದ್ದಾರೆ. ಆದರೆ, ದೀಪಕ ಚಿಂಚೋರೆ ಅವರು ಇಂದು ಆ ಬಸ್ನಲ್ಲಿ ತಾವೇ ಸ್ವತಃ ಪ್ರಯಾಣಿಸಿ. ಚಾಲುಕ್ಯನಗರದವರೆಗೂ ಪ್ರಯಾಣಿಸಿದರು .ಅಲ್ಲಿಯ ನಿವಾಸಿಗಳು ಸಾರ್ವಜನಿಕರು ಪೂಜೆ ಸಲ್ಲಿಸಿ.ನಂತರ ದೀಪಕ ಚಿಂಚೋರೆ ಅವರಿಗೆ ಸನ್ಮಾನಿಸಿ ಸಂತಸ ವ್ಯಕ್ತಪಡಿಸಿದರು
