ಬಳ್ಳಾರಿ ಆ. 25 : ನಗರದ ರಾಯಲ್ ಸರ್ಕಲ್ ನಲ್ಲಿರುವ ಗಾಂಧಿ ಭವನದಲ್ಲಿ ರೈತ ಸಂಘದಿಂದ ನಮ್ದು ಸಂತೆ ಎಂಬ ವಿನೂತನ ಮಾರುಕಟ್ಟೆಯನ್ನು ಸಂಪೂರ್ಣ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ರೈತ ಸಂತೆಯನ್ನು ಆರಂಭಿಸಲಾಗುವುದು ಎಂದು ಈರಪ್ಪಯ್ಯ ತಿಳಿಸಿದರು.
ಈ ಕುರಿತು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಅವರು ಬುಧವಾರ ಮುಂಜಾನೆ 11 ಗಂಟೆಗೆ ನಮ್ದು ಸಂತೆ ಆರಂಭಿಸಲಾಗುವುದು ಈ ಸಂತೆಯಲ್ಲಿ ನಮ್ಮ ಬೆಳೆ ನಮ್ಮದು ಬೆಲೆ ನಮ್ಮದೇ ಮಾರುಕಟ್ಟೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿಷಮುಕ್ತ ಭೂಮಿ ಹಾಗೂ ವಿಷಮುಕ್ತ ಆಹಾರದಿಂದ ಆರೋಗ್ಯವಂತ ಭಾರತವನ್ನು ಕಟ್ಟುವ ಕಡೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದೊಂದಿಗೆ ನಮ್ದು ರೈತ ಉತ್ಪಾದಕರ ಸಂಸ್ಥೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ಹೊನ್ನೂರು ಪ್ರಕಾಶ್ ವಹಿಸಿಕೊಳ್ಳಲಿದ್ದಾರೆ ರೈತ ಸಂತೆಯನ್ನು ಮಹಾನಗರ ಪಾಲಿಕೆ ಮೇಯರ್ ಪಿ ಗಾದೆಪ್ಪ ಉದ್ಘಾಟಿಸಲಿದ್ದಾರೆ ಮಹಿಳಾ ರೈತ ಸಾಲ ವಿಮೋಚನಾ ಸಂಘಗಳ ಉದ್ಘಾಟನೆಯನ್ನು ಪೊಲೀಸ್ ಜಿಲ್ಲಾ ಅಧೀಕ್ಷಕರಾದ ಸುಮನ್ ಡಿ ಪನ್ನೇಕರ್ ಉದ್ಘಾಟಿಸುವರು ಇವರ ಜೊತೆಗೆ ಮಂಜಮ್ಮ ಜೋಗತಿ ಮಾಳಮ್ಮ ಮಲ್ಲಿಕಾರ್ಜುನ ಇವರು ಕೈಜೋಡಿಸಲಿದ್ದಾರೆ. ಅತ್ಯಂತ ಮುಖ್ಯವಾಗಿ ಈ ಈ ಸಂತೆಯನ್ನು ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯರಾದ ಚುಕ್ಕಿ ನಂಜುಂಡಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.
ಈ ಸಂತೆಯಲ್ಲಿ ಸುಮಾರು 40 ಜನ ಸಾವಯವ ಕೃಷಿಕರು ಭಾಗವಹಿಸಲಿದ್ದು 40 ಮಳಿಗೆಗಳನ್ನು ಹಾಕಲಾಗುವುದು ಈ ಎಲ್ಲಾ ಮಳಿಗೆಗಳಲ್ಲಿ ವಿಷಮುಕ್ತ ಮತ್ತು ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುವುದು ನಗರದ ಮತ್ತು ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಈ ಸಾವಯವ ಪದಾರ್ಥಗಳನ್ನು ಖರೀದಿಸಿ ಉತ್ತಮ ಆರೋಗ್ಯ ಪಡೆಯಲು ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹುಲಿಕೆರೆ ಸಜ್ಜನ್ ವಿವೇಕಾನಂದ ರವಿ ಮೋಹನ್ ಗಾಯಕ್ವಾಡ್ ದೊಡ್ಡ ಬಸವನಗೌಡ ಬದರಿ ನಾರಾಯಣ ಗುಪ್ತ ಮಂಜುನಾಥ್ ಸೇರಿದಂತೆ ಇತರರಿದ್ದರು.