ನೇಸರಗಿ. ಇಲ್ಲಿಗೆ ಸಮೀಪದ ಮದನಭಾವಿ ಗ್ರಾಮದ ಮುರಕೀಭಾವಿ ವಿವಿದೊದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿ.ಮದನಭಾವಿ ಇದರ ನೂತನ ಅಧ್ಯಕ್ಷರಾಗಿ ಅಡಿವಪ್ಪ ವೀರಪ್ಪ ಕುಂದರನಾಡ ಮತ್ತು ಉಪಾಧ್ಯಕ್ಷರಾಗಿ ಈರನಗೌಡ ಬಸವಂತರಾಯ ಪಾಟೀಲ ಅವರು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ ಮಾರ್ಗದರ್ಶನದಲ್ಲಿ ಮತ್ತು ಮದನಭಾವಿ , ಮುರಕೀಭಾವಿ , ಲಕ್ಕುಂಡಿ ಗ್ರಾಮದ ಹಿರಿಯರ, ರೈತರ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಭೆ ನಂತರ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ 3 ಗ್ರಾಮಗಳ ರೈತರಿಗೆ ಯಾವುದೇ ತೊಂದರೆ ಆಗದಂತೆ ಬೀಜ, ಗೊಬ್ಬರ, ರೈತ ಸಲಕರಣೆ, ಸರಿಯಾದ ಸಮಯಕ್ಕೆ ಸಾಲ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಕೆಲಸ ಮಾಡಬೇಕು, ಅದರಂತೆ ರೈತ ಉದ್ದಾರಕ್ಕೆ ನೂತನ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿ ಸದಸ್ಯರು ಹಾಗೂ ಹಿರಿಯರೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ರೈತರ ಮತ್ತು ಸಂಘದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರಿ ಎಂದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಗಳ ಹಿರಿಯರಾದ ಈಶ್ವರ ಮಿಡಕನಟ್ಟಿ, ಸೋಮಪ್ಪ ಮಲ್ಲಾರಿ,ರಾಮನಗೌಡ ದೊಡ್ಡಗೌಡರ, ಶಿವಪ್ಪ ಕೊಳದೂರ,ರುದ್ರಗೌಡ ಪಾಟೀಲ, ಯಲ್ಲನಗೌಡ ದೊಡ್ಡಗೌಡರ, ಶಿವಪ್ಪ ಗುಜನಾಳ,ನಿಂಗನಗೌಡ ದೊಡ್ಡಗೌಡರ, ಶಿವಾನಂದ ಪಾಟೀಲ,ಮಹಾಂತೇಶ ದೊಡ್ಡಗೌಡರ,ವೀರನಗೌಡ ದೊಡ್ಡಗೌಡರ, ಶ್ರೀಶೈಲ ಕುಲಕರ್ಣಿ,ಶಂಕರ ಅಂಗಡಿ, ಅಡಿವಪ್ಪ ಪಾಟೀಲ, ಅಣ್ಣಯ್ಯ ನಂಜರಗಿ,ಗೌಡಪ್ಪ ದೊಡಗೌಡರ , ಶೇಖರಪ್ಪ, ಭದ್ರಿ, ಹಣಮಂತ ಹಳೆಮನಿ,ಬಾಬು ಶೇಬನ್ನವರ, ಸಿದ್ರಾಮ ಸಾವಳಗಿ ಸೇರಿದಂತೆ ಮದನಬಾವಿ, ಮುರಕೀಬಾವಿ, ಲಕ್ಕುಂಡಿ ಗ್ರಾಮಗಳ ಮುಖಂಡರು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.ಚುನಾವಣೆ ಅಧಿಕಾರಿಯಾಗಿ ಬಸವರಾಜ ಹಡಪದ ಕಾರ್ಯನಿರ್ವಹಿಸಿದರು.