LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Gadag

ಪಂಡಿತ ಪಂಚಾಕ್ಷರ ಗವಾಯಿಗಳವರ ೮೬ ನೇ ಪುಣ್ಯಸ್ಮರಣೋತ್ಸವ 


ಗದಗ,  ೧೭ : ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ವತಿಯಿಂದ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪಂಚಾಕ್ಷರ ಗವಾಯಿಗಳವರ ಕಾಲೇಜಿನ ಆವರಣದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ೮೬ ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳವರ ೧೬ ನೇ ಪುಣ್ಯಸ್ಮರಣೋತ್ಸವ ಮತ್ತು ಗುರುಪೂರ್ಣಿಮೆಯ ಅಂಗವಾಗಿ ಸಂಗೀತೋತ್ಸವ ಹಾಗೂ ಉಪನ್ಯಾಸ ಮತ್ತು ನುಡಿನಮನ ಕಾರ್ಯಕ್ರಮ ಜರುಗಿತು. 
ಸಸಿಗೆ ನೀರುಣಿಸುವ ಮೂಲಕ ಸಂಗೀತ ಪಾಠಶಾಲೆಯ ಮುಖ್ಯೋಪಾಧ್ಯಾಯ ಮಂಜಯ್ಯ ಎಸ್. ಹಿರೇಮಠ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೂಜ್ಯ ಹೆಸರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ಜರುಗುತ್ತಿರಲಿ ಎಂದರು. 
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಂಗೀತ ಕಲಾವಿದರಾದ ಪಂ. ವೆಂಕಟೇಶಕುಮಾರ ಅಲ್ಕೋಡ ಅವರು ಮಾತನಾಡಿ, ಜ್ಞಾನ ಜ್ಯೋತಿ ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ ನಿರಂತರ ಜ್ಞಾನ ಜ್ಯೋತಿಯಾಗಿ ಅಂಧ ಅನಾಥರ ಹಾಗೂ ನಾಡಿನ ಕಲ್ಯಾಣ ಕೆಲಸ ಮಾಡುತ್ತಿರಲಿ ಎಂದರು. 
ಸಂಗೀತ ಉಪನ್ಯಾಸಕರಾದ ಅಂಬಾದಾಸ ಎಸ್. ಜಮಾದಾರ ಅವರು ಉಪನ್ಯಾಸ ನೀಡಿದರು. 
ಮುಖ್ಯೋಪಾಧ್ಯಾಯ ಪಿ. ಎಸ್.  ಹಿರೇಮಠ, ತಬಲಾ ಶಿಕ್ಷಕರಾದ ರಾವುತಪ್ಪ ಹೂಗಾರ, ಶೇಖಣ್ಣ ರೋಣಿ, ಕುಮಾರಸ್ವಾಮಿ ವೆಂಕಟಾಪುರಮಠ, ಕಳಕಪ್ಪ ಕುರ್ತಕೋಟಿ, ಶಿವಚಲಕುಮಾರ ಸಾಲಿಮಠ, ಕಳಕಪ್ಪ ಮದ್ಲಾಪೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 
ಅಂಧ ಅನಾಥ ಮಕ್ಕಳ ಸೇವೆಗಾಗಿ 
ಸಮಾಜ ಕಲ್ಯಾಣ ಇಲಾಖೆಯಿಂದ ೨೦೨೬ ರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಳಕಪ್ಪ ವೀರಪ್ಪ ಮದ್ಲಾಪೂರ ಅವರನ್ನು ಸನ್ಮಾನಿಸಲಾಯಿತು. 
ಪುಟ್ಟರಾಜ ವೆಂಕಟಾಪುರಮಠ, ಸಂಕೇಶ್ವರ ಮಸಣಿ, ಸೋಹಿನಿ ವಿ.  ಅಲ್ಕೋಡ, ರೇಣುಕಾ ಲಕ್ಕುಡಿ, ಶ್ರೇಯಸ್ ಮಂಡ್ಯ, ಮಲ್ಲು, ಆದರ್ಶ ಜಾಧವ, ರಾಹುಲ ಅಮ್ಮಿನಗಡ ಸಂಗೀತ ಕಾರ್ಯಕ್ರಮ ನೀಡಿದರು. 
ರಾಮಯ್ಯ ಸಂಬಾಳಮಠ ಪ್ರಾರ್ಥಿಸಿದರು. ಶಿವಚಲಕುಮಾರ ಸಾಲಿಮಠ ಹಾಗೂ ಕಳಕಪ್ಪ ಕುರ್ತಕೋಟಿ ನಿರೂಪಿಸಿದರು. ಕುಮಾರಸ್ವಾಮಿ ವೆಂಕಟಾಪುರಮಠ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್