ಬಾಗಲಕೋಟೆ, ಜುಲೈ ೦3 : ನವನಗರದ ಯೂನಿಟ್-೧ ಮತ್ತು ಯೂನಿಟ್-೨ರ ನಿವೇಶನ ಹಂಚಿಕೆ ಪಡೆದವರಿಗೆ ಒಟ್ಟು ೪೩ ಇ-ಖಾತಾ ಉತಾರೆಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬಿಟಿಡಿಎ ಮುಖ್ಯ ಅಭಿಯಂತರ ಸಿ.ಎಂ.ಬಂಡಿ, ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ಕಾರ್ಯನಿರ್ವಾಹಕ ಅಭಿಯಂತರ ವಾಯ್.ಬಿ.ಪಾತ್ರೋಟ ಸೇರಿದಂತೆ ನೀಲಕಂಠ ಅಂಕದ ಹಾಗೂ ಶ್ರೀನಿವಾಸ ಬಳ್ಳಾರಿ ಇದ್ದರು.
