ಅಥಣಿ: ಅಥಣಿ ಜನತೆಗೆ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಆದೇಶದ ಮೇರೆಗೆ ಮತ್ತು ಮಾರ್ಗದರ್ಶನದಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಬಾರದೆಂದು 25 ಕೋಟಿ ರೂ.ವೆಚ್ಚದ ಕೆರೆ ಅಭಿವೃದ್ಧಿಗೊಳಿಸಿ ನೀರು ತುಂಬಿಸುವ ಯೋಜನೆಗೆ ಇಷ್ಟರಲ್ಲಿಯೇ ಚಾಲನೆ ನೀಡುತ್ತೇವೆ ಎಂದು ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಹೇಳಿದರು.
ಅವರು ನಗರ ಸಭಾ ಕಾರ್ಯಾಲಯದಲ್ಲಿ ಕರೆದಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕೆರೆಯಲ್ಲಿ ನೀರು ತುಂಬಿಸುವುದರಿಂದ ಸಹಜವಾಗಿಯೇ ಅಥಣಿ ನಗರದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಾಗುವುದರಿಂದ ಕೊಳವೆ ಭಾವಿಗಳು ಚಾರ್ಜ ಆಗುವುದು ಎಂದ ಅವರು ಯಾವ ಕಾರಣಕ್ಕೂ ಅಥಣಿಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಈಗಿನಿಂದಲೇ ಎಚ್ವರ ವಹಿಸಿ ಎಂದು ಆದೇಶಿಸಿರುವೆ ಎಂದರು.
ಅಥಣಿ ಜನತೆಗೆ ಇನ್ನಷ್ಟು ಸೌಲಭ್ಯ ದೊರಕಬೇಕು ಎನ್ನುವ ಕಾರಣದಿಂದ ಸಹಕಾರ ಸಚಿವರಾದ ಲಕ್ಷ್ಮಣ ಸವದಿಯವರು 10 ಕೋಟಿ ಅನುದಾನದಲ್ಲಿ ಭಾಗೀರಥಿ ನಾಲಾ ಅಭಿವೃದ್ಧಿ ಯೋಜನೆಯನ್ನೂ ಸಹ ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆ ಪೂರ್ಣಗೊಳ್ಳುವುದರಿಂದ ಕೊಳಚೆ ನಿರ್ಮೂಲನೆಯಾಗುತ್ತದೆ ಎಂದ ಅವರು ನಮ್ಮ ಆದ್ಯತೆ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದರು.
ಅಥಣಿಯಲ್ಲಿ ಈಗಾಗಲೇ ಪ್ರಾರಂಭಗೊಂಡ ಅಮೃತ 2 ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ನಿಗದಿತ ಅವಧಿಯೋಳಗಾಗಿಯೇ ಪೂರ್ಣಗೊಳಿಸಬೇಕು ಎಂದು ಈಗಾಗಲೇ ಸಚಿವ ಲಕ್ಷ್ಮಣ ಸವದಿಯವರು ಆದೇಶಿಸಿದ್ದಾರೆ ಎಂದ ಅವರು ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದರು.
ಸಚಿವ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಅಥಣಿ ತಾಲೂಕು ಬರಗಾಲ ಪಿಡಿತ ಎಂದು ರಾಜ್ಯ ಸರಕಾರ ಘೋಶಿಸಿದ್ದು, ಇದಕ್ಕೆ ಕಾರಣರಾದ ಲಕ್ಷ್ಮಣ ಸವದಿಯವರನ್ನು ನಾವು ಅಭಿನಂದಿಸಲೇಬೇಕು ಎಂದ ಅವರು ತಾಲೂಕಿನ ಪೂರ್ವಭಾಗದ ದ್ರಾಕ್ಷಿ ಮತ್ತು ಡಾಳಿಂಬೆ ಬೆಳೆಗಾರರಿಗೆ 80 ಕೋಟಿ ವಿಮಾ ಹಣ ಮಂಜೂರಾಗಲು ಲಕ್ಷ್ಮಣ ಸವದಿಯವರೇ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ,
ದಯಾ ಜೋಶಿ, ಕಚೇರಿ ವ್ಯವಸ್ಥಾಪಕರು,
ಎಂ.ಬಿ.ಮಾಡಗಿ,
ರವೀಂದ್ರ ಸನಗೊಂಡ, ಎ ಎಲ್ ನದಾಫ,
ಅಕ್ಷಯ ಸೌಸುದ್ಧಿ, ಸುಜಾತಾ ಸುರಗೌಂಡ.ವಿನುತಾ.ಮಹೇಶ ಜಾಧವ, ಅಭಿಜೀತ ಮಾಂಡವಕರ,ರೇವಣಸಿದ್ದ ಹುಗಾರ,ಗುರು ಕೆಂಪಸತ್ತಿ
ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು