ಘಟಪ್ರಭಾ. ಸಮೀಪದ ಶಿವಾಪುರ (ಕೆ)ಗ್ರಾಮಸ್ಥರು ಹಾಗೂ ( ಘಟಪ್ರಭಾ ನಿವಾಸಿಗಳು )ಹಿರಿಯ ರಾಜಕೀಯ ಧುರೀಣರು, ಸಹಕಾರಿ ಬಂದುಗಳು ಹಾಗೂ ಕೆ ಎಂ ಎಫ್ ಹಾಲಿನ ಡೈರಿ ಅಧ್ಯಕ್ಷರು ಶಿವಾಪುರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ನೇಹಜೀವಿಗಳಾದ ರಮೇಶ್ ಬಸವಣ್ಣೆಪ್ಪ ಕಬಾಡಗಿ (62 ವರ್ಷ)ಇವರು ಬುಧವಾರ ದಿ. 26-08-2026 ರಂದು ಸಂಜೆ 7:30ಕ್ಕೆ ನಿಧನ ಹೊಂದಿರುತ್ತಾರೆ.
ಇವರ ಅಂತ್ಯಕ್ರಿಯೆಯು ಬುಧವಾರ ದಿ. 26-08-2026 ರಂದು ರಾತ್ರಿ 10 ಗಂಟೆಗೆ ಅವರ ಸ್ವಗ್ರಾಮದ ಶಿವಾಪುರ(ಕೂ) ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು.ಮೃತರು ತಂದೆ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶಿವಾಪುರ (ಕೆ ) ಮತ್ತು ಘಟಪ್ರಭಾ ಭಾಗದ ಮುಖಂಡರು, ಸಹಕಾರಿ ಬಂದುಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.