ಪರಿಸರವೇ ಪರಮಾತ್ಮ ಗಿಡ, ಮರ  ಬೆಳೆಸಿ: ವಿರೇಶ ಹಿರೇಮಠ

Ravi Talawar
ಪರಿಸರವೇ ಪರಮಾತ್ಮ ಗಿಡ, ಮರ  ಬೆಳೆಸಿ:  ವಿರೇಶ ಹಿರೇಮಠ
WhatsApp Group Join Now
Telegram Group Join Now
ಬೆಳಗಾವಿ.ಗಿಡಗಳನ್ನು ನೆಟ್ಟು ಮರವಾಗಿಸಿ  ಪರಿಸರ ಬೆಳೆಸಿ ದೇಶದ  ರಕ್ಷಣೆ ಮಾಡಿ ಪರಿಸರವೇ ಪರಮಾತ್ಮ ಆಗಲು  ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು  ಸರ್ವಲೋಕ  ಪೌಂಡೇಷನ ಸಂಸ್ಥಾಪಕರಾದ ವಿರೇಶ ಹಿರೇಮಠ ಹೇಳಿದರು.
ಅವರು ಖಾನಾಪುರ ತಾಲೂಕಿನ ಗುರ್ಲಗುಂಜಿ ಗ್ರಾಮದ ಶ್ರೀ ಕ್ಷೇತ್ರ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಅಲಪ್ರಿಯ, ಬಿಲ್ವಪತ್ರಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಗೋದಾಳ ಪಾಟೀಲ, ಪಾಂಡುರಂಗ ಪಾಟೀಲ, ಪಾಂಡುರಂಗ ಸಾವಂತ, ಪರಶುರಾಮ ಚೌಗಲಾ, ಗ್ರಾ ಪಂ ಅಧ್ಯಕ್ಷ ಹಣಮಂತ ಮಲಗೆ, ಸುರೇಶ ಮಳಿಗೆ, ಮರೆಪ್ಪ ಮಲಗೆ ಸೇರಿದಂತೆ ಗುರ್ಲಗುಂಜ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article