“ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ”

MK HasiruKranti
“ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ”
WhatsApp Group Join Now
Telegram Group Join Now
ಬಳ್ಳಾರಿ, ಏ.19 ಜಿಲ್ಲೆ ಸಂಡೂರು ತಾಲೂಕು ತೋರಣಗಲ್ಲು ಗ್ರಾಮದ ಒಂದನೇ ವಾರ್ಡ್ ಜನತಾ ಕಾಲೋನಿಯಲ್ಲಿ ಆಸ್ಪತ್ರೆಯಲ್ಲಿರುವ ಕುಡಿಯುವ ನೀರಿನ ಫಿಲ್ಟರ್  ನೀರು ಘಟಕ ಆರು ತಿಂಗಳ ಹಿಂದಗಡೆ ಕೆಟ್ಟು ಹೋಗಿದೆ ಎಂದು.   ತೋರಣಗಲ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪೀಲ್ಟರ್ ನೀರು ಘಟಕ ಕೆಟ್ಟು ಹೋಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರ ಸಾರ್ವಜನಿಕರು ನೀಡಿದ್ದರು. ಆದನಂತರ  ಮೋಟಾರ್ ಗಳು ಕೆಟ್ಟು ಹೋಗಿದೆ ಎಂದು ಮೋಟರುಗಳನ್ನು ಅಳವಡಿಸಿ ಹೊಸ ಫಿಲ್ಟರ್ ಮತ್ತು ಸಾಮಾನುಗಳನ್ನು ಹಾಕಿದ್ದೇವೆ ಎಂದು ಲಕ್ಷಗಟ್ಟಲೆ ಬಿಲ್ ಪಾಸ್ ಮಾಡಿರುವ ವಂಚನೆಯಾಗಿತ್ತಿದ್ದು ಮತ್ತು ಸರಿಯಾಗಿ ಫಿಲ್ಟರ್ ಆಗದೆ ನೀರು ಬರುತ್ತಿದ್ದು.ಇದನ್ನು ಸಂಪೂರ್ಣವಾಗಿ ತನಿಖೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು15 ರಿಂದ 20 ದಿನಗಳು ಕಳೆದಿದೆ ಈಗಾಗಲೇ ಫಿಲ್ಟರ್ ಮಿಷನ್ ಕೆಟ್ಟು ಹೋಗಿದ್ದು. ಸಾರ್ವಜನಿಕರು ಖಾಸಗಿ ಫಿಲ್ಟರ್ ನೀರಿಗೆ 10 ರೂ ತರಲಾರದೆ ಕೊಳಾಯಿ ನೀರಿನ ಅವಲಂಬಿಸಿದ್ದಾರೆ. ಕೊಳಯಿ ನೀರು ವಾಸನೆ ಬರುತ್ತಿದ್ದು ಆ ನೀರು ಕುಡಿದರೆ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದರೆ ಯಾರ ಹೊಣೆಗಾರರು? ಸಂಬಂಧಪಟ್ಟ ಅಧಿಕಾರಿಗಳು ಫಿಲ್ಟರ್ ನೀರನ್ನು ಸರಿಪಡಿಸಬೇಕು.  ತನಿಕೆ ನಡೆಸಬೇಕು ಇಲ್ಲದಿದ್ದರೆ ಪಂಚಾಯಿತಿ ಮುಂದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಈ ಪತ್ರಿಕೆ ಹೇಳಿಕೆ ಮೂಲಕ ಸಂಬಂಧಟ್ಟ ಅಧಿಕಾರಿಗಳಿಗೆ ಡಿವೈಎಫ್ಐ ಜಿಲ್ಲಾ ಅಧ್ಯಕ್ಷರು ಯು.ಎರ್ರಿಸ್ವಾಮಿ  ಎ.ಸ್ವಾಮಿ ಸಂಡೂರು ತಾಲೂಕು ಸಿಪಿಐ (ಎಂ)ಪಕ್ಷದ ಕಾರ್ಯದರ್ಶಿ. ಯು.ಎರ್ರಿಸ್ವಾಮಿ
ಡಿವೈಎಫ್ಐ.ಜಿಲ್ಲಾ ಅಧ್ಯಕ್ಷರು ಸ್ವಾಮಿ ಜಿಲ್ಲಾ ಕಾರ್ಯದರ್ಶಿ ಬಿಪಿ ನವೀನ್ ಜಿಲ್ಲಾ ಖಜಾಂಚಿ ಜಿ ಎನ್ ಎರ್ರಿಸ್ವಾಮಿ ಜಿಲ್ಲಾ ಕ್ರೀಡಾ ಅಧ್ಯಕ್ಷರು ಎ.ತಿಪ್ಪರುದ್ರ ತಾ ಅಧ್ಯಕ್ಷರು ನಾಗಭೂಷಣ್ ಸೇರಿದಂತೆ ಸ್ಥಳೀಯ ನಿವಾಸಿಗಳಿಳು ಎಚ್ಚರಿಕೆ ನೀಡಿದ್ದಾರೆ
WhatsApp Group Join Now
Telegram Group Join Now
Share This Article