ಬೆಳಗಾವಿ,ಏ,೧೫ : ಬೆಳಗಾವಿಯಲ್ಲಿ ರೌಡಿ ಶೀಟರ್ ಲಕ್ಷಣ ದಡ್ಡಿ ಅಟ್ಟಹಾಸ ಮೇರೆದು ಮಧ್ಯಮಗಳ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಬುಧವಾರ ಸಂಜೆ ವೇಳೆ ಬೆಳಗಾವಿ ಕೋರ್ಟ್ ಆವರಣದಲ್ಲಿ ನಡೆದಿದೆ.
ಪೊಲೀಸರ ಮುಂದೆಯೇ ರೌಡಿಗಳ ರಾಕ್ಷಸೀ ಪ್ರವೃತ್ತಿಯನ್ನು ವರ್ತನೆ ಮಾಡಿದ್ದಾನೆ. ಬೆಳಗಾವಿಯಲ್ಲಿ ರೌಡಿಶೀಟರ್ಗಳ ಪುಂಡಾಟಿಕೆ ಮಿತಿಮೀರಿದೆ. ಶಹಬಾಜ್ ಪಠಾಣ್ ಕೊಲೆ ಪ್ರಕರಣದ ವಿಚಾರಣೆಗೆ ಬಂದಿದ್ದ ರೌಡಿಶೀಟರ್ಗಳು, ನ್ಯಾಯಾಲಯದ ಆವರಣದಲ್ಲೇ ಕರ್ತವ್ಯ ನಿರತ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಶಹಬಾಜ್ ಪಠಾಣ್ ಕೊಲೆ ಪ್ರಕರಣಕ್ಕೆ ಸಬಂಧಿಸಿದಂತೆ ಬೆಳಗಾವಿ ಎರಡನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಹಿಂಡಲಗಾ ಜೈಲಿಗೆ ರವಾನೆ ಮಾಡುವ ವೇಳೆ ಮಾಧ್ಯಮಗಳ ಕ್ಯಾಮರಾ ಮೆನ್ಗಳು ವಿಡಿಯೋ ಶೂಟಿಂಗ್ ಮಾಡಿಕೊಳ್ಳುತ್ತಿದ್ದಂತೆಯೇ ರಾಕ್ಷಸ ಪ್ರವೃತ್ತಿ
ತೋರಿದ್ದಾನೆ.
ಲಕ್ಷ್ಮಣ ದಡ್ಡಿ, ಸವೀನ ದಡ್ಡಿ, ಬಸವರಾಜ ದಡ್ಡಿ, ಬಸವಣ್ಣಿ ನಾಯಕ ಮಾಳಮಾರುತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಿ ಬಳಿಕ ಮರಳಿ ಜೈಲಿಗೆ ಕರುಳಿಸುವಾಗ ಈ ಘಟನೆ ನಡೆದಿದೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೌಡಿಶೀಟರ್ ವಿರುದ್ಧ ಬೆಳಗಾವಿ ಪತ್ರಕರ್ತರು ಆಕ್ರೋಶವನ್ನು ಹೊರಹಾಕಿ ಆರೋಪಿ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ಪೊಲೀಸರ ಮುಖಾಂತರ ನ್ಯಾಯಾಲಯಕ್ಕೆ ಮನವಿ ಆಗ್ರಹಿಸಿದರು.
ಕೋರ್ಟ್ ಆವರಣದಲ್ಲಿ ರೌಡಿ ಶೀಟರ್ ಅಟ್ಟಹಾಸ ಮಾಧ್ಯಮಗಳ ಮೇಲೆ ಹಲ್ಲೆ -ಅವಾಚ್ಯ ಶಬ್ದಗಳಿಂದ ನಿಂದನೆ


