ಕೇಂದ್ರದಲ್ಲಿ 69ನೇ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ

Ravi Talawar
ಕೇಂದ್ರದಲ್ಲಿ 69ನೇ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ
WhatsApp Group Join Now
Telegram Group Join Now

ನೇಸರಗಿ: ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ೯೬ ನೇ ಸಂಸ್ಥಾಪನಾ ದಿನವನ್ನು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಚರಿಸಲಾಯಿತು. ದಿನಾಚರಣೆಯ ಉದ್ಘಾಟನೆಯನ್ನು ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಅಂಗಡಿ ನೇರವೇರಿಸಿದರು. ನಂತರ ಮಾತನಾಡಿದ ಅವರು
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೇಂದ್ರ ಸರ್ಕಾರದ ಕೃಷಿ  ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಗುಣಮಟ್ಟದ ಕೃಷಿ ಶಿಕ್ಷಣ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯವನ್ನು ನಿರ್ವಹಿಸುವ ಅತ್ಯುನ್ನತ ಸಂಸ್ಥೆಯಾಗಿದೆ.

ಈ ಸಂಸ್ಥೆಯು  ವಿಶ್ವದಲ್ಲಿಯೆ ಬೃಹತ್ ರಾಷ್ಟ್ರೀಯ ಕೃಷಿ ವ್ಯವಸ್ಥೆಯಾಗಿದ್ದು, ದೇಶಾದ್ಯಂತ ೭೩೧ ಕೃಷಿ ವಿಜ್ಞಾನ ಕೇಂದ್ರಗಳು ಕೃಷಿ ವಿಸ್ತರಣಾ ಚಟುವಟಿಕೆಯಲ್ಲಿ
ನಿರತವಾಗಿವೆ ಎಂದರು. ಸಂಸ್ಥಾಪನಾ ದಿನಾಚರಣೆಯ ರಾಷ್ಟ್ರಮಟ್ಟದ ಪ್ರಧಾನ ಕಾರ್ಯಕ್ರಮವು ನವದೆಹಲಿಯಲ್ಲಿ ನೇರವೇರಿತು.

ಈ ಸಂದರ್ಭದಲ್ಲಿ ನಡೆದ ಕೃಷಿ ತಂತ್ರಜ್ಞಾನದ ಪ್ರದರ್ಶನವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳಾದ ಶ್ರೀ ಶಿವರಾಜ  ಸಿಂಗ್ ಚೌಹಾಣ ನೇರವೇರಿಸಿದರು. ರೈತರಿಗೆ ಈ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜನೆ ಮಾಡಲಾಯಿತು.

ದಿನಾಚರಣೆಯ ಭಾಗವಾಗಿ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆಯನ್ನು ಮಾಡಲಾಯಿತು ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಯ ಉತ್ಪನ್ನಗಳು, ನೈಸರ್ಗಿಕ ಕೃಷಿ ಪರಿಕರಗಳು, ವಿವಿಧ ಸುಧಾರಿತ ತಳಿ ಬೀಜಗಳು, ಜೈವಿಕ ಗೊಬ್ಬರ, ಎರೆಜಲ, ದೇಸಿ ತಳಿಯ ತರಕಾರಿ ಬೀಜಗಳು, ಗುಣಮಟ್ಟದ ಹಣ್ಣು ಬೆಳೆಗಳ ಸಸಿಗಳು, ಸಸ್ಯ ಸಂರಕ್ಷಣಾ ಕೀಟ್ ಹಾಗೂ ಪೀಡೆನಾಶಕಗಳ ಪರಿಚಯ ಮಾಡಲಾಯಿತು.

ಅದರಂತೆ, ರೈತರ ಜಮೀನುಗಳಲ್ಲಿ ಮತ್ತು ಸಮುದಾಯ ಸ್ಥಳಗಳಲ್ಲಿ ಒಟ್ಟು ೪೩೨೦ ಅರಣ್ಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಕುರಿತು
ಜಾಗೃತಿ ಮೂಡಿಸಲಾಯಿತು. ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಭಾಗವಹಿಸಿದ್ದರು ಹಾಗೂ ೧೦೦ ಕ್ಕೂ ಹೆಚ್ಚು ರೈತರು  ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article