ಐರಾವತ ಬಸ್​ನಲ್ಲಿ ಬೆಂಕಿ: ಅನಾಹುತ ತಪ್ಪಿಸಿದ ಸ್ಥಳೀಯರು

Ravi Talawar
ಐರಾವತ ಬಸ್​ನಲ್ಲಿ ಬೆಂಕಿ: ಅನಾಹುತ ತಪ್ಪಿಸಿದ ಸ್ಥಳೀಯರು
WhatsApp Group Join Now
Telegram Group Join Now

ಉಪ್ಪಿನಂಗಡಿ/ದಕ್ಷಿಣ ಕನ್ನಡ: ಕೆಎಸ್​ಆರ್​ಟಿಸಿ ಐರಾವತ ಬಸ್‌ಗೆ ಬೆಂಕಿ ತಗುಲಿದ ಘಟನೆ ಇಲ್ಲಿನ ಹಳೆಗೇಟು ಸಮೀಪ ಗುರುವಾರ ಬೆಳಗ್ಗೆ ನಡೆಯಿತು. ವಿಷಯ ತಿಳಿದ ತಕ್ಷಣ ಸ್ಥಳೀಯ ಯುವಕರು ಬೆಂಕಿ ನಂದಿಸಿ ಅನಾಹುತ ತಡೆದರು.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್​ನ ಹಿಂಬದಿ ಎಸಿಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಹಳೆಗೇಟು ಬಳಿ ಬಸ್ ನಿಲ್ಲಿಸಿದ್ದಾನೆ. ಪ್ರಯಾಣಿಕರು ಕೂಡಲೇ ಬಸ್‌ನಿಂದ ಇಳಿದಿದ್ದಾರೆ. ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಇಸಾಕ್, ಇಕ್ಬಾಲ್ ಹಾಗು ಸ್ಥಳೀಯರಾದ ಜಾಯಿ, ಸ್ನೇಕ್ ಝಕರಿಯಾ, ಸಿದ್ದೀಕ್ ಕೊಪ್ಪಳ ಸೇರಿದಂತೆ ಆಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರು ಎರಚಿ ಬೆಂಕಿಯನ್ನು ಹತೋಟಿಗೆ ತಂದರು. ಬಸ್ ಹಿಂಬದಿಗೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

 

WhatsApp Group Join Now
Telegram Group Join Now
Share This Article