Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಯೋಗವೇ ವರದಾನವಾಗಿದೆ"

ಪಿಎಂಶ್ರೀ ಸೋರಗಾಂವ ಶಾಲೆಯಲ್ಲಿ ಶಿಕ್ಷಕರ-ಪಾಲಕರ ೨ನೇ ಮಹಾಸಭೆ ಮತ್ತು ಪುನಃಚೇತನ ಕಾರ್ಯಕ್ರಮ


ರನ್ನ ಬೆಳಗಲಿ:ಜ.೦೩., ಮುಧೋಳ ತಾಲೂಕಿನ ಸೋರಗಾಂವ ಗ್ರಾಮದಲ್ಲಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ. ಶನಿವಾರ ದಂದು ಶಿಕ್ಷಕರ-ಪಾಲಕರ ೨ನೇ ಮಹಾಸಭೆ ಮತ್ತು ಒಂದು ದಿನದ ಪುನಃಚೇತನ ಕಾರ್ಯಕ್ರಮ ಜರುಗಿತು.

ಗೈಬುಸಾಬ ನದಾಫ ಎಸ್.ಡಿ. ಎಮ್.ಸಿ ಅಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯೋಪಾದ್ಯರಾದ ಬಿ ಆರ್ ಶಿರೂರ ಮಾತನಾಡಿ ಸರ್ಕಾರದ ಮಹತ್ವಕಾಂಕ್ಷೆಯ ಸಭೆಯೇ ಈ ಶಿಕ್ಷಕರ-ಪಾಲಕರ ಸಭೆಯಾಗಿದೆ. ಒಂದು ಮಗುವಿನ ಸವಾಂಗಿನ ಪ್ರಗತಿಗೆ ಯಾವ ಯಾವ ಕೌಶಲ್ಯಗಳ ಬೇಕು, ಆ ಎಲ್ಲಾ ಕೌಶಲ್ಯಗಳನ್ನು ಪಿಎಂ ಶ್ರೀ ಯೋಜನೆ ಅಡಿಯಲ್ಲಿ ನಮ್ಮ ಶಾಲೆಗೆ ಸರ್ಕಾರ ಒದಗಿಸುತ್ತಿದೆ. ಮನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ವಾತಾವರಣವನ್ನು ಪಾಲಕರು ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಸಭೆ ಉದ್ದೇಶಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಯೋಗವೇ ವರದಾನವಾಗಿದೆ. ಮುಂಜಾವಿನಲ್ಲಿ ಮಕ್ಕಳು ನಿತ್ಯ ಪ್ರಾಣಾಯಾಮ ಮತ್ತು ಸರಳ ಯೋಗಭ್ಯಾಸವನ್ನು ಮಾಡಲಿ,ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಿ.ಅವರ ಮುಂದೆ ಒಳ್ಳೆತನವನ್ನೇ ಬಿಂಬಿಸಿ, ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿದರೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ ಕೆ ಅಮ್ಮಣಗಿ,ವಿಜಯ ಮಲಕನ್ನವರ, ಎಸ್ ಎಸ್ ಜೀರಗಾಳ,ವಿ ಎಚ್ ಗೌಡರ,ಆರ್ ಎಮ್ ಡೊಂಬರ್,ಡಿ ಎಸ್ ಪೂಜಾರಿ,ಪರಮಾನಂದ ಮುಗಳಕೋಡ ಶಿಕ್ಷಕರು ತರಗತಿವಾರು ವಿದ್ಯಾರ್ಥಿಗಳ ವಯಕ್ತಿಕ ಮಾಹಿತಿ ಜೊತೆಗೆ, ಮಕ್ಕಳ ಪ್ರಗತಿಯ ಮಟ್ಟವನ್ನು ಪಾಲಕರ ಮುಂದೆ ತಿಳಿಸಿ.ಪಾಲಕರಿಂದ ಸಲಹೆ ಸೂಚನೆ ಸ್ವೀಕರಿಸಿ,೧೦ನೇ ತರಗತಿಯ ಮಹತ್ವ ಮತ್ತು ಮುಂದೆ ದೊರೆಯಬಹುದಾದಂತ ವಿವಿಧ ಕ್ಷೇತ್ರಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ರುಕ್ಮವ್ವ ಕುಟ್ರಟ್ಟಿ,ಪು? ಹೊಸವಾಲಿಕಾರ,ಶಾಂತವ್ವ ಪರೀಟ,ವಿಠ್ಠಲ ದಡ್ಡಿಮನಿ,
ಲಕ್ಷ್ಮೀಬಾಯಿ ಮ್ಯಾಗೇರಿ,ಭೀಮಶಿ ಹಗಳಗಾರ,ಬಲಭೀಮ ಪೂಜಾರಿ,ಬಸಪ್ಪ ಲೋಕಾಪೂರ,ವೆಂಕಪ್ಪ ಮಳಲಿ,ರಮೇಶ ಪೂಜಾರಿ ಹಾಗೂ ಪಾಲಕ ಪೋ?ಕರು, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ