Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಸ್ತಿ ಕಲೆ ಗ್ರಾಮೀಣ ಸಂಸ್ಕೃತಿಯ ಹೆಮ್ಮೆ : ಬಿರಾದಾರ


ಮುದ್ದೇಬಿಹಾಳ :   ಪಟ್ಟಣದಲ್ಲಿ ಲಕ್ಷ್ಮೀ ವೆಂಕಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಳೆಯ ತಹಶೀಲ್ದಾರ ಕಚೇರಿ ಹತ್ತಿರದ ಸೈನಿಕ ಮೈದಾನದಲ್ಲಿ ಭರ್ಜರಿಯಾಗಿ ಕುಸ್ತಿ ಪದ್ಯಾವಳಿ ನಡೆಯಿತು. ಈ ಪೈಪೋಟಿಗೆ ಸ್ಥಳೀಯ ಮತ್ತು ಹೊರಗಿನಿಂದ ಬಂದ ಅನೇಕ ಕುಸ್ತಿಪಟುಗಳು ಭಾಗವಹಿಸಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದರು.

ಕಾರ್ಯಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ್ ಬಿರಾದಾರ ಚಾಲನೆ ನೀಡಿದ ಅವರು  ಮಾತನಾಡಿ, ಕುಸ್ತಿ ಕಲೆ ಗ್ರಾಮೀಣ ಸಂಸ್ಕೃತಿಯ ಹೆಮ್ಮೆ. ಇದು ಕೇವಲ ದೈಹಿಕ ಶಕ್ತಿ ಪ್ರದರ್ಶನವಲ್ಲ, ಶಿಸ್ತು ಮತ್ತು ಸಹನಶೀಲತೆಯ ಸಂಕೇತ ಎಂದರು.

ಪೈಪೋಟಿಯ ಪ್ರಮುಖ ಆಕರ್ಷಣೆಯಾಗಿದ್ದ ಬೀರಪ್ಪ ಬನಸೋಡೆ ಮತ್ತು ಸಂಜು ಬಜಂತ್ರಿ ಇವರಿಬ್ಬರ ನಡುವಿನ ಪಂದ್ಯ ಸುಮಾರು 45 ನಿಮಿಷಗಳ ಕಾಲ ಕಠಿಣವಾಗಿ ನಡೆಯಿತು. ಇಬ್ಬರೂ ಶ್ರೇಷ್ಠ ಕೌಶಲ್ಯ ಪ್ರದರ್ಶಿಸಿದ ಕಾರಣದಿಂದ ನಿರ್ಣಾಯಕರ ಸಮಿತಿ ಪಂದ್ಯವನ್ನು ಸಮನಾಗಿ ಘೋಷಿಸಿತು.

ಈ ಸಂದರ್ಭದಲ್ಲಿ ಪ್ರಥಮ ಬಹುಮಾನವಾಗಿದ್ದ 50,000 ಮೊತ್ತವನ್ನು ಇಬ್ಬರು ಕುಸ್ತಿಪಟುಗಳಿಗೆ ತಲಾ 25,000 ರೂ. ನೀಡಲಾಯಿತು ಎಂದು ತಾಲೂಕು ಬೋವಿ ವಡ್ಡರ್ ಸಮಾಜದ ಅಧ್ಯಕ್ಷ ರವಿ ಹಡಲಗೇರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಶೇಖರ ಢವಳಗಿ, ಪುರಸಭೆ ಸದಸ್ಯ ಹಣಮಂತ ಭೋವಿ, ಮುಖಂಡರಾದ ಪರಶು ನಾಲತವಾಡ, ಹಣಮಂತ ಹಡಲಗೇರಿ, ಶೇಟ್ಟಪ ಭೋವಿ, ಪಂಡಿತ ಇರಕಲ್ಲ, ಲಕ್ಷ್ಮಣ ವಡ್ಡರ, ಸುನೀಲ ಹಡಲಗೇರಿ, ದುರಗಪ್ಪ ಮಹಾಲಿಂಗಪೂರ, ಹಣಮಂತ ಭೀ ಬೆಳಗಲ್ಲ, ಹಣಮಂತ ಮಹಾಲಿಂಗಪೂರ, ವಕೀಲ ರವಿ ನಾಲತವಾಡ, ಹಾಗೂ ಆನಂದ ಹಡಲಗೇರಿ ಉಪಸ್ಥಿತರಿದ್ದರು.





Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ