Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು-ಡಾ ಶರ್ವಾಣಿ

ಮಹಾಲಿಂಗಪುರ : ಗ್ರಾಮ.ಪಟ್ಟಣದಲ್ಲಿರುವ ಪ್ರತಿಯೊಬ್ಬ ಮಹಿಳೆಯರು ತಮ್ಮ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು, ಒಂದು ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬವೆ ಆರೋಗ್ಯವಾಗಿರಲು ಸಾಧ್ಯ ಎಂದು ಖ್ಯಾತ ವ್ಯೆದ್ಯರಾದ ಡಾ ಶರ್ವಾಣಿ ಕನಕರಡ್ಡಿ ಹೇಳಿದರು.
ಸೋಮವಾರ ಮುಂಜಾನೆ ಸ್ಥಳೀಯ ಸಮೂದಾಯ ಆರೋಗ್ಯ ಕೇಂದ್ರ ಮತ್ತು ಓಂ ಸಾಯಿ ಎಜುಕೇಶನ ಸೋಸಾಯಿಟಿ, ಡಾ. ವ್ಹಿ.ಪಿ ಕನಕರಡ್ಡಿ ಮೇಮೋರಿಯಲ್ ಕಾಲೇಜ ಆಪ್ ನರ್ಸಿಂಗ ಆಶ್ರಯದಲ್ಲಿ ನಡೆದ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದಲ್ಲಿ ಮಾತನಾಡಿದ ಅವರು ಮಹಿಳೆಯರು ದಿನಂಪ್ರತಿ ಮತ್ತು ಗರ್ಭವತಿಯಾದಾಗ ಯಾವ ರೀತಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು, ಯಾವ ಯಾವ ಆಹಾರ ತಿನ್ನಬೇಕು, ಹುಟ್ಟಿದ ಮಗುವನ್ನು ಯಾವ ರೀತಿಯಲ್ಲಿ ಯೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ಆಸ್ಪತ್ರೆಯಲ್ಲಿ ನೆರೆದಿರುವ ಮಹಿಳೆಯರಿಗೆ ಮನದಟ್ಟುವ ಹಾಗೆ ತಿಳಿಹೇಳಿದರು.
ನಂತರ ಮಾತನಾಡಿದ ಸಮೂದಾಯ ಆರೋಗ್ಯ ಕೇಂದ್ರದ ಮುಖ್ಯವ್ಯೆದ್ಯಾಧಿಕಾರಿ ಡಾ. ಎಸ್.ಎಸ್ ಮೋಸಿನ ಒಂದು ಮನೆ ಅಥವಾ ಒಂದು ಕುಟುಂಬ ಚನ್ನಾಗಿ ಇರಬೇಕಾದರೆ ಆ ಕುಟುಂಬದ ಒಡತಿ ಮೊದಲು ಆರೋಗ್ಯವಂತರಾಗಿರಬೇಕು, ಅಂದಾಗ ಮಾತ್ರ ಇಡಿ ಆ ಕುಟುಂಬವೇ ಆರೋಗ್ಯವಾಗಿರಲು ಸಾಧ್ಯ. ಮಕ್ಕಳಗೆ ಚಿಕ್ಕದಿನಿಂದಲೆ ಸರಿಯಾದ ಮಾರ್ಗ ತೋರಿಸುವಳು ತಾಯಿ, ಆ ತಾಯಿಗೆ ಮೊದಲು ಆರೋಗ್ಯದ ಬಗ್ಗೆ ಎಲ್ಲ ತರಹದ ಮಾಹಿತಿ ಇರಬೇಕು, ಮಕ್ಕಳ ಆಹಾರ ಪದ್ದತಿ, ಅವರ ಬೆಳವಣಿಗೆ ಬೇಕಾಗುವ ಅವಶ್ಯಕ ಆಹಾರವನ್ನು ತಿನ್ನಿಸುತ್ತ ಬಂದಾಗ ಮಾತ್ರ ಅವರ ಬೆಳವಣಿಗೆ ಚನ್ನಾಗಿ ಆಗಲು ಸಾಧ್ಯ ಆದ್ದರಿಂದ ಮೊದಲು ಮಹಿಳೆಯರು ತಮ್ಮ ಹೆಂತಾ ಪರಿಸ್ಥೀತಿಯಲ್ಲಿಯೂ ಕೂಡಾ ಎದೆ ಗುಂದದೆ ಮೊದಲು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಾಗ ಮಾತ್ರ ಇಡಿ ಕುಟುಂಬ ಆರೋಗ್ಯವಾಗಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಡಾ. ವ್ಹಿ.ಪಿ ಕನಕರಡ್ಡಿ ಮೇಮೋರಿಯಲ್ ಕಾಲೇಜ ಆಪ್ ನರ್ಸಿಂಗನ ವಿದ್ಯಾರ್ಥಿಗಳು ತಾಯಿ ಮತ್ತು ಮಗುವಿನ ಉತ್ತಮ ಬೆಳವಣಿಗೆಗೆ ಕಾರಣ, ಮತ್ತು ಮನೆಯಲ್ಲಿನ ಆಹಾರದ ಬಳಕೆ, ತಾಯಿ ಹಾಲು ಮಕ್ಕಳಿಗೆ ಎಷ್ಟು ಶ್ರೇಷ್ಠ ಹೀಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಹಿಳೆಯರಿಗೆ ಮನದಟ್ಟಾಗುವ ಹಾಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯೆದ್ಯರಾದ ಡಾ.ಸಿ.ಎಂ ವಜ್ಜರಮಟ್ಟಿ, ಡಾ.ಎಸ್.ಹೆಚ್, ತೇಲಿ, ಪ್ರೋ. ಅನೀಲ್ ಪತ್ರಿಮಠ, ಶಿಕ್ಷಕಿಯರಾದ ದೀಕ್ಷಾ, ಲಕ್ಷ್ಮೀ, ಶಿವಲಿಂಗ ಶಿರಗುಪ್ಪಿ, ಆನಂದ ಗೌಡರ, ಸಂಗೀತಾ ಹತ್ರೋಟೆ, ವಾಣಿ ಉಪ್ಪಾರ, ಕವಿತಾ ಗುಡದನ್ನವರ, ಪರಮಾನಂದ ತಳಗೇರಿ, ಪ್ರಜ್ವಲ್ ತೋಟಗಿ, ಎಶೋದಾ, ವೈಷ್ಣವಿ ಒಂಟಮೂರಿ ಹಾಗೂ ಕನಕರಡ್ಡಿ ಸರ್ಸಿಂಗ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥೀತರಿದ್ದರು. ವಿನಯಕುಮಾರ ಮೋಡ್ಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ