ಬಳ್ಳಾರಿ. ಮೇ 29 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಲಯ ಕಚೇರಿಗಳಲ್ಲಿ ಮತ್ತು ಕೇಂದ್ರ ಕಚೇರಿಗಳಲ್ಲಿ ಅಕ್ರಮವಾಗಿ ಬಿ-ಖಾತೆ ವಿತರಿಸುತ್ತಾರೆಂದು ಹಾಗೂ ಫಾರಂ-2 ವಿತರಣೆಯಲ್ಲಿ ಹಾಗೂ ಇತರೆ ಸರ್ಕಾರಿ ಸೇವೆಯನ್ನು ನೀಡಲು ವಿಳಂಬಮಾಡುತ್ತಾ ಅಕ್ರಮ ಎಸಗುತ್ತಿದ್ದಾರೆಂದು ಹಲವು ದೂರು/ಮಾಹಿತಿಗಳು ಬಂದಿದ್ದರಿಂದ ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿಗಳು, ಕರ್ನಾಟಕ ರಾಜ್ಯ ರವರು ಸ್ವಯಂ ಪ್ರೇರಿತವಾಗಿ ದೋರನು ದಾಖಲಿಸಿಕೊಂಡು, ಬಳ್ಳಾರಿ ಮಹಾನಗರ ಪಾಲಿಕೆ ಮತ್ತು ಅದರ ವಲಯ ಕಚೇರಿಗಳ ಶೋಧನೆಗಾಗಿ ಶೋಧನಾ ವಾರಂಟ್ ಅನ್ನು ಹೊರಡಿಸಿದ ಮೇರೆಗೆ ಬಳ್ಳಾರಿ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ವಾಸುದೇವರಾಮ.ಎನ್ ರವರ ನೇತೃತ್ವದಲ್ಲಿ ಬಳ್ಳಾರಿ ಲೋಕಾಯುಕ್ತ ಘಟಕದ ಪೊಲೀಸ್ ಸಿಬ್ಬಂದಿ ಹಾಗೂ ಪಂಚಸಾಕ್ಷಿದಾರರೊಂದಿಗೆ ಒಟ್ಟು 4 ತಂಡಗಳಾಗಿ ಈ ದಿನ ದಿನಾಂಕ:29/05/2026 ರಂದು ಬೆಳಿಗ್ಗೆ ಏಕಕಾಲಕ್ಕೆ ಬಳ್ಳಾರಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ ಹಾಗೂ 3 ವಲಯ ಕಚೇರಿಗಳ ಮೇಲೆ ದಾಳಿ ಮಾಡಿ, ಶೋಧನೆಯನ್ನು ಮಾಡಿದ್ದು, ಶೋಧನೆ ಸಮಯದದಲ್ಲಿ ಹಲವು ಅಕ್ರಮಗಳು ಕಂಡುಬಂದಿದ್ದು, ಈ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಶೋಧನಾ ಕಾರ್ಯವನ್ನು ಮುಕಾಯಗೊಳಿಸಿರುತ್ತದೆ.
ಈ ಶೋಧನಾ ಕಾರ್ಯದಲ್ಲಿ ಲೋಕಾಯುಕ್ತ ಡಿ.ವೈ.ಎಸ್.ಪಿ ರವರಾದ ಎಸ್.ಎಸ್.ಬೀಳಗಿ, ಪೊಲೀಸ್, ಸಚಿನ್ ಎಸ್ ಚಲವಾದಿ, ಪೊಲೀಸ್ ಇನ್ಸ್ಪೆಕ್ಟರ್ ರವರಾದ ಗುರಣ್ಣ ಎಸ್ ಹೆಬ್ಬಾಳ್, ಶ್ರೀ ಸುರೇಶ್ ಎಂ ಬಾವಿಮನಿ, ರಾಜೇಶ್ ಲಮಾಣಿ, ಅಮರೇಶ ಹುಬ್ಬಳ್ಳಿ ಹಾಗೂ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.
