ಅವರು ಸಮೀಪದ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ ಶುಗರ್ಸ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮಾಜಿ ಸಚಿವ, ಉತ್ತರ ಕರ್ನಾಟಕ ಹೋರಾಟಗಾರ ದಿ. ಉಮೇಶ ಕತ್ತಿ ಅವರ ಜೀವನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ಸಣ್ಣ ಪುಟ್ಟ ಕಾರ್ಯಗಳಿಗೆ ತಲೆ ಕೆಡಿಕೊಳ್ಳದ ಉಮೇಶ ಅಣ್ಣಾ ಅವರು ನಮ್ಮ ಭಾಗದ ಜನ ಮೈಸೂರು ಕೆ ಆರ್ ಎಸ್ ಮತ್ತು ಆಲಮಟ್ಟಿ ಡ್ಯಾಮ್ ವೀಕ್ಷಣೆಗೆ ಹೋಗುತ್ತಾರೆ ಅದರ ಬದಲಿಗೆ ನಮ್ಮ ಹೆಮ್ಮೆಯ ರಜಾ ಲಕ್ಕಮಗೌಡ ಹಿಡಕಲ್ ಜಲಾಶಯದಲ್ಲಿ ವಿನೂತನ ಮಾದರಿ ಡ್ಯಾಮ್ ಮಾಡಲು ನನ್ನೊಂದಿಗೆ ಚರ್ಚಿಸಿ ಅದರ ಸಾಕಾರಕ್ಕೆ ಶ್ರಮಿಸಿದ್ದರು, ಅದರ ಕೆಲಸ ಈಗ ಹಂತ ಹಂತವಾಗಿ ನಡೆದಿದೆ ಆದರೆ ಇಂದು ಅವರಿಲ್ಲ , ಅವರು ಅನೇಕರು ನಾಯಕರಗಳು ಸಹಾಯ, ಸಹಕಾರ ನೀಡಿದ್ದಾರೆ. ಜಾತಿ ರಾಜಕಾರಣ ಮಾಡಿದವರಲ್ಲ, ಈಗಿನ ಜಿಲ್ಲಾ ರಾಜಕಾರಣ ಜನರಿಗೆ ಮಾರಕ ಆಗುತ್ತಿದೆ ಎಂದರು.