Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನ ಪ್ರಪಂಚದಲ್ಲಿ ಯುದ್ಧದ ಕಾರ್ಮೊಡಗಳು: ಟಿ.ವಿ.ಎಸ್. ರಾಜು



ಬಳ್ಳಾರಿ,ಮೇ.28.: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕ್ಕೋತರ ಕೇಂದ್ರ ಬಳ್ಳಾರಿಯಲ್ಲಿ ಸೆಂಟರ್ ಫಾರ್ ಪ್ರೋಟೆಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ವತಿಯಿಂದ ‘ಸೇತುಗಳನ್ನು ನಿರ್ಮಿಸಿ ಯುದ್ಧ ಭೂಮಿಗಳನ್ನಲ್ಲ’ ಎನ್ನುವ ವಿಷಯ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಭಾಷಣಕಾರರಾಗಿ ಸಿಪಿಡಿಆರ್‌ಎಸ್ ನ ಶಿವಮೊಗ್ಗ ಜಿಲ್ಲೆಯ ಸಂಚಾಲಕ ಟಿ.ವಿ.ಎಸ್. ರಾಜು ಮಾತನಾಡುತ್ತಾ, ‘ಇಂದಿನ ಪ್ರಪಂಚದಲ್ಲಿ ಎಲ್ಲಿ ನೋಡಿದರು ಯುದ್ಧದ ಕಾರ್ಮೊಡಗಳು ಸುತ್ತಿಕೊಂಡಿವೆ. ಎಲ್ಲಾ ರಾಷ್ಟçಗಳು ತಮ್ಮ ಬಜೆಟ್‌ನಲ್ಲಿ ಮಿಲಿಟರಿಗೆ ಗಣನೀಯವಾದ ಹಣಕಾಸನ್ನು ನೀಡುತ್ತಿವೆ. ಯದ್ಧ ಶಸ್ತಾçಸ್ತçಗಳನ್ನು ತಯಾರಿಸುವ ಉದ್ದಿಮೆ ಅತ್ಯಂತ ಲಾಭದಾಯಕವಾಗಿದೆ. ಯುದ್ಧಗಳು ಇಲ್ಲವಾದಲ್ಲಿ ಈ ಉದ್ದಿಮೆಗಳು ಮುಚ್ಚಬೇಕಾಗುತ್ತದೆ. ಈ ಉದ್ದಿಮೆದಾರರು ಕೋಟ್ಯಾಂತರ ರೂಪಾಯಿ ಹಣವನ್ನು ಈ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಇವರ ವ್ಯಾಪಾರ ನಡೆಯಬೇಕಾದರೆ ಯುದ್ಧಗಳು ನಿರಂತರವಾಗಿ ಇರಬೇಕಾಗುತ್ತದೆ. ಯುದ್ಧಗಳ ಪರಿಣಾಮವಾಗಿ ಇಂದು ಉಕ್ರೇನ್‌ನಲ್ಲಿ, ಪ್ಯಾಲೇಸ್ಥೆöÊನ್‌ನಲ್ಲಿ ಸಾವಿರಾರು ನಾಗರಿಕರು ಮಕ್ಕಳು ಮಹಿಳೆಯರು ಸೇರಿದಂತೆ ಹಾಗೂ ಆಸ್ಪತ್ರೆಗಳು ಶಾಲೆಗಳು ಜನರ ವಸತಿಗಳು ಸರ್ವನಾಶವಾಗಿವೆ. ಸಾಮ್ರಾಜ್ಯಶಾಹಿ ರಾಷ್ಟçಗಳ ತಮ್ಮ ಪ್ರಾಬಲ್ಯವನ್ನು ರಕ್ಷಿಸಿಕೊಳ್ಳಲು ಹಾಗೂ ಸಂಪನ್ಮೂಲ ಭರಿತ ರಾಷ್ಟçಗಳಲ್ಲಿ ಇರುವ ಖನಿಜ ಮತ್ತು ತೈಲ ಸಂಪತ್ತಿನ ಮೇಲೆ ತಮ್ಮ ಅಧಿಪತ್ಯ ಸಾದಿಸಿ ಕೊಳ್ಳೆ ಹೊಡೆದು ಲಾಭ ಮಾಡಿಕೊಳ್ಳಲು ಸ್ಪರ್ಧೆಗಿಳಿದಿವೆ. ಈ ರಾಷ್ಟçಗಳ ಮದ್ಯೆ ನಡೆಯುವ ವ್ಯಾಪಾರಿ ಪೈಪೋಟಿಯಿಂದಲೇ ಯುದ್ಧಗಳು ಸಂಭವಿಸುತ್ತಿವೆ. ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಯುದ್ಧಗಳು ನಿಲ್ಲಬೇಕಾದರೆ ಜನತೆ ಶಾಂತಿಗಾಗಿ ಐಕ್ಯ ಹೋರಾಟಗಳನ್ನು ಕಟ್ಟಬೇಕು’ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಶಾಸ್ತç ವಿಭಾಗದ ಹೊನ್ನರ್ ಅಲಿ ಅವರು, ‘ನಾವು ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಯುದ್ಧ ನಡೆಯುತ್ತಾ ಇದೆ ಅದಕ್ಕೂ ನಮಗೂ ಸಂಬAದ ಇಲ್ಲ ಎಂದು ಸುಮ್ಮನೆ ಕೂಡದೆ ವಿಚಾರ ಮಾಡಿ ಪ್ರತಿಕ್ರಿಯಸಬೇಕು’ ಎಂದರು.

ಪ್ರಾಸ್ತಾವಿಕವಾಗಿ ಅರ್ಥಶಾ ಸ್ತçದ ಉಪನ್ಯಸಕ ಹುಚ್ಚುಸಾಬ್ ಹಾಗೂ ಸಿಪಿಡಿಆರ್‌ಎಸ್ ನ ಜಿಲ್ಲಾ ಸಂಚಾಲಕರಾದ ಆರ್. ಸೋಮಶೇಖರ್ ಗೌಡ  ಮಾತನಾಡಿದರು. ರಾಜ್ಯಶಾಸ್ತçದ ಉಪನ್ಯಾಸಕರಾದ ಶ್ರೀನಿವಾಸ್ ವಂದನಾರ್ಪಣೆ ಮಾಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ