Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಹಾಗೂ ವಯಕ್ತಿಕ ಟಾರ್ಗೇಟ್: ಡಾ.ಶ್ರೀ ಸಿದ್ದಸೇನ ಮಹಾರಾಜ

ರಾಯಬಾಗ: ರಾಜ್ಯದಲ್ಲಿ  ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಹಾಗೂ ವಯಕ್ತಿಕ ಟಾರ್ಗೇಟ್ ಮಾಡುತ್ತಿದ್ದಾರೆ. ಹಾಗಾಗಿ ವಕೀಲರು ಮುಂದೆ ಬಂದು ನ್ಯಾಯ ಒದಗಿಸಬೇಕು ಎಂದು  108 ಡಾ.ಶ್ರೀ ಸಿದ್ದಸೇನ ಮಹಾರಾಜರು ಕರೆ ನೀಡಿದ್ದಾರೆ.




 ರಾಯಬಾಗ ತಾಲೂಕಿನ ಪಾವನ ವರ್ಷಾಯೋಗದ ನಿಮಿತ್ತ ರಾಜ್ಯಮಟ್ಟದ ಜೈನ್ ವಕೀಲರ ಸಮಾವೇಶದಲ್ಲಿ ಸಾನಿಧ್ಯವಹಿಸಿ‌ ಮಾತನಾಡಿದರು.ಜೈನರ ದೇವಸ್ಥಾನಗಳ ಮೇಲೆ ಅಕ್ರಮನ ನಡೆಯುತ್ತಿದೆ.  ಹಾಗಾಗಿ  ಜೈನ್ ಯುವಕರು ವಕೀಲರಾಗಿ ಹಾಗೂ ಇದ್ದ ವಕೀಲರು ಜಾಗೃತರಾಗಿ ಜೈನ್ ಧರ್ಮ ಕಾಪಾಡಬೇಕು. ಮಾಜಿ ಪ್ರಧಾನಿ ಅವರ‌ ಮೊಮ್ಮಗನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ. ಇದು ವಕೀಲರಿಂದ ಸಾದ್ಯವಾಗಿದೆ. ಹಾಗಾಗಿ ಯುವ ವಕೀಲರು ಕಾನೂನು ಬಗ್ಗೆ ಸಂಪೂರ್ಣ ಅದ್ಯಯನ ಮಾಡಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.


ಜೈನರಲ್ಲಿ ಪಂಗಡಗಳಾಗಿವೆ ಅದಲೆಲ್ಲ ಬದಿಗೊತ್ತಿ ಜೈನರು ಒಗ್ಗಟ್ಟಾಗಬೇಕಿದೆ. ವಿವಿಧ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಎಲ್ಲರೂ ಒಗ್ಗಟ್ಟಾಗಿ, ನಮ್ಮ ಮೇಲೆ ಅಕ್ರಮನ ಮಾಡುವವರ ವಿರುದ್ಧ ಧ್ವನಿ ಎತ್ತಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸ್ಟೇಟ್ ಬಾರ್ ಅಸೋಶಿಯೇಶನ್ ಸದಸ್ಯ ಆನಂದ ಮಗದುಮ್ ಮಾತನಾಡಿ, ಕಾನೂನು ಬಗ್ಗೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ನಮ್ಮನ್ನು ಕೇಳಿ. ನಾವು ನಿಮಗೆ‌ ಸಲಹೆ ನೀಡುತ್ತೇನೆ. ಎಲ್ಲ ಯುವಕರು ಹೆಚ್ಚೆಚ್ಚು ಅಧ್ಯಯನ ನಡೆಸಿ ಉನ್ನತ ಸ್ಥಾನಕ್ಕೆ ಹೋಗಬೇಕು. ಅಹಂಕಾರ ಬಿಡಬೇಕು. ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಎಂದು ಸಲಹೆ ನೀಡಿದರು.

ಸಿದ್ಧಸೇನ ಶ್ರೀಗಳ ನೇತೃತ್ವದಲ್ಲಿ ರಾಜ್ಯಮಟ್ಟದ ವಕೀಲರ ಸಮಾವೇಶ ಮಾಡುತ್ತಿರುವುದು ಸಂತಸದ ವಿಷಯ. ಕೇವಲ ವಕೀಲರಷ್ಟೆ ಅಲ್ಲ ಎಲ ಜೈನ್ ಸಮುದಾಯದ ಯುವಕ ಯುವತಿಯರು ಸಮಾವೇಶದ ಲಾಭ ಪಡೆದುಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ಹಿರಿಯನ್ಯಾಯವಾಧಿ ಡಿ ಜೆ ಗುಂಡೆ, ನ್ಯಾಯಾದೀಶರಾದ ಸುಶಾಂತ ಚೌಗಲೆ, ಭರತೇಶ ಬನವಣೆ, ಪಿ ಎಸ್ ಉಗಾರೆ, ಅಭಯ ಅಕಿವಾಟೆ, ವಿಧ್ಯಾಧರ ಪಾಟೀಲ, ರಾಜಗೌಡ ಪಾಟೀಲ, ಬಾಹುಸಾಹೇಬ್ ಪಾಟೀಲ, ಪಾಸಗೌಡ ಪಾಟೀಲ, ಬಿ ಎ ಗಣಿ, ಮಹಾವೀರ ಖೋಂಬಾರೆ, ಸುನೀಲ ಜೈನ್ ಸೇರಿದಂತೆ ಧಾರವಾಡ, ಬಾಗಲಕೋಟ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಮಹರಾಷ್ಟ್ರ ದಿಂದ ನೂರಾರು ಜನರು ವಕೀಲರು ಉಪಸ್ಥಿತರಿದ್ದರು. ಎಸ್ ಡಟಿ ಮುನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಯಪಾಲ ಬನವಣೆ ಸ್ವಾಗತಿಸಿದರು. ಸಂಜಯ ಪಾಟೀಲ ನಿರೂಪಿಸಿದರು.





Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ