ಬಳ್ಳಾರಿ. ಜು. ೧೪ : ಮನೆ ಮನೆಗೆ ತೆರಳಿ ಇನಿಮುರೇಷನ್ ಫಾರಂ ಗಳಲ್ಲಿ ವಿವರಗಳನ್ನು ಸಂಗ್ರಹಿಸುವಂತೆ ಚುನಾವಣಾ ಆಯೋಗದ ಸ್ಪಷ್ಟ ಆದೇಶವಿದ್ದರೂ ಬಳ್ಳಾರಿ ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆ ವೀರಾಪುರ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕೊಟ್ರಮ್ಮ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಳಿತು ಜನಗಳನ್ನು ಗುಂಪು ಗುಂಪಾಗಿ ಕರೆದುಕೊಂಡು ಗಣತಿ ನಮೂನೆಗಳನ್ನು ಭರ್ತಿ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಸರಿಯಾದ ರೀತಿಯಲ್ಲಿ ಗಣತಿ ನಡೆಯುವುದು ಸಾಧ್ಯವಾಗುವುದಿಲ್ಲ ಸಂಬಂಧಿಸಿದ ಅಧಿಕಾರಿಗಳು ವಿಎ ಕೊಟ್ರಮ್ಮ ಅವರು ಮನೆಮನೆಗೆ ತೆರಳಿ ಗಣತಿ ನಮೂನೆಗಳನ್ನು ಭರ್ತಿ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಕೆ ವಿರಾಪುರ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಗ್ರಾಮದ ಸಾರ್ವಜನಿಕರು ವಿಎ ಕೊಟ್ರಮ್ಮ ಅವರನ್ನು ಪ್ರಶ್ನಿಸಿದಾಗ ಮನೆಮನೆಗೆ ಓಡಾಡುವುದು ತುಂಬಾ ತ್ರಾಸದಾಯಕ ಕೆಲಸವಾಗಿದೆ ಇದರಿಂದ ನಾನು ಒಂದು ಪ್ರದೇಶದ ಜನರನ್ನು ಈ ಆಸ್ಪತ್ರೆಯಲ್ಲಿ ಕರೆದುಕೊಂಡು ಗಣತಿ ನಮೂನೆಗಳನ್ನು ಭರ್ತಿ ಮಾಡುತ್ತಿದ್ದೇನೆ . ಇದರಿಂದ ನಿಮಗೇನು ನಷ್ಟ ಎಂದು ಸಾರ್ವಜನಿಕರನ್ನು ದಭಾಯಿಸುತ್ತಿದ್ದಾರೆ. ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಸ್ಐಆರ್ ಉಸ್ತುವಾರಿಗಳಾದ ಸಹಾಯಕ ಆಯುಕ್ತರು ಇವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಕೆ ವಿರಾಪುರ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.