Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟೇಬಲ್‌ ಟೆನಿಸ್:‌ ಯು ಮುಂಬಾ ತಂಡಕ್ಕೆ ಯುಟಿಟಿ ಕಿರೀಟ್‌

ಅಮಹದಾಬಾದ್:‌ ಯು ಮುಂಬಾ ತಂಡವು ಅಲ್ಟಿಮೇಟ್‌ ಟೇಬಲ್‌ ಟಿನಿಸ್‌ (ಯುಟಿಟಿ) ಟೂರ್ನಿಯ 6ನೇ ಅವೃತ್ತಿಯ ಕಿರೀಟವನ್ನು ಮಡಿಗೇರಿಸಿಕೊಂಡಿತು.

ಇಲ್ಲಿನ ಇ.ಕೆ.ಎ. ಅರೆನಾದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮುಂಬಾ ತಂಡವು 8-4 ಅಂತರದಿಂದ ಜೈಪುರ ಪೇಟ್ರಿಯಾಟ್ಸ್ ತಂಡವನ್ನು ಸೋಲಿಸಿ,  ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚಾಂಪಿಯನ್ ಆಗಿ ಹೊರಹೊಮ್ಮಿದ ಯು ಮುಂಬಾ ತಂಡಕ್ಕೆ 60 ಲಕ್ಷ ಮತ್ತು ರನ್ನರ್ ಅಪ್ ಜೈಪುರ ತಂಡ 40ಲಕ್ಷ  ಹಾಗೂ ಸೆಮಿಫೈನಲ್‌ ತಲುಪಿದ್ದ ದಬಾಂಗ್ ಡೆಲ್ಲಿ ಟಿಟಿಸಿ ಮತ್ತು ಗೋವಾರ ಚಾಲೆಂಜರ್ಸ್ ತಂಡಗಳು ತಲಾ  17.5 ಲಕ್ಷ ಪಡೆದವು. ಹಾಲಿ ಆವೃತ್ತಿಯಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.

ಗೆಲುವಿನ ಯಶಸ್ಸು ತಂದ ಕೊಟ್ಟ ಯಶಸ್ವಿನಿ: ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ  ಬೆಳಗಾವಿಯ ಮೂಲದವರಾಗಿದ್ದು, ಸತತ 2ನೇ ವರ್ಷವೂ ಯುಟಿಟಿಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಯಶಸ್ವಿನಿ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಡೆಂಪೊ ಗೋವಾ ಚಾಲೆಂಜರ್ಸ್ ತಂಡದ ಸದಸ್ಯೆಯಾಗಿದ್ದರು. ಅಲ್ಲದೇ ಇವರು ಮಹಿಳೆಯರ ವಿಭಾಗದಲ್ಲಿ ಪ್ರಸ್ತುತ ಭಾರತ 2 ನೇ ಸ್ಥಾನ, ಯುವ ಭಾರತ 1 ನೇ ಸ್ಥಾನ, ಯುವ ಡಬಲ್ಸ್ ಪದ 1 ನೇ ಸ್ಥಾನ, ಪ್ರಸ್ತುತ ವಿಶ್ವದಲ್ಲಿ 81 ನೇ ಸ್ಥಾನ ಪಡೆದಿದ್ದು,  ಇವರು22-23ಸಾಲಿನ ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಸೇರಿದಂತೆ  50 ರಾಷ್ಟ್ರೀಯ ಪದಕ ಹಾಗೂ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ಸಾಧನೆಗೈದ ಯಶಸ್ವಿನಿಗೆ ಶುಭಾಷಯಗಳ ಮಹಾಪೂರ: ಟೇಬಲ್‌ ಟೆನಿಸ್ ದಲ್ಲಿ ಸಾಧನೆ ಮಾಡಿದ  ಕರ್ನಾಟಕದ ಯುವ ತಾರೆ ಯಶಸ್ವಿನಿ ಘೋರ್ಪಡೆ  ಅವರಿಗೆ ಕಲಿತ ಶಾಲೆ, ಕ್ರೀಡಾ ತರಬೇತಿದಾರು ಸೇರಿದಂತೆ ಬೆಳಗಾವಿ ಹಾಗೂ ಗದಗದ ಅವರ ಕುಟುಂಬಸ್ಥರು ಶುಭ ಹಾರೈಸಿದ್ದಾರೆ. ಇವರ ಸಾಧನೆ ಇನ್ನೆ ಆಕಾಶಕ್ಕೆತರಕ್ಕೆ ಎರಲಿ ಎಂಬುವುದು ಅವರ ಅಭಿಮಾನಿಗಳ ಆಶಯಗಳಾಗಿವೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ