ಬಳ್ಳಾರಿ,ಮೇ.೦9 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಸಂಘದ ಗೌರವಾಧ್ಯಕ್ಷರಾದ ಎ.ಶಾಂತಾ ಹಾಗೂ ಅಧ್ಯಕ್ಷೆ ಗೀತಾರವರ ನೇತೃತ್ವದಲ್ಲಿ ಜಿಲ್ಲಾ ಡಿಹೆಚ್ಓರವರಿಗೆ ಡಿ.ಎಲ್.ಓ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.
ರಾಜ್ಯದ ಆಶಾ ಕಾರ್ಯಕರ್ತೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರು. ಮುಖ್ಯವಾಗಿ ಕಳೆದ ಒಂದು ವರ್ಷದಿಂದ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ - ಪ್ರೋತ್ಸಾಹಧನ ಪ್ರತೀ ತಿಂಗಳು ಬರುತ್ತಿಲ್ಲ. ಈಗಲೂ ೩-೪ ತಿಂಗಳವರೆಗೆ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ.೧-೨ ತಿಂಗಳ ಗೌರವಧನ ಬಾಕಿ ಇದೆ.ಪ್ರತೀ ತಿಂಗಳು ವೇತನ ನಿಗದಿತವಾಗಿ ಬರುತ್ತಿಲ್ಲ. ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟುಕೇಂದ್ರದ ಪ್ರೋತ್ಸಾಹಧನ ಬರುತ್ತಿಲ್ಲ. ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆAಟ್ಗಳ ಹಣ ಬಿಡುಗಡೆಆಗಿಲ್ಲ. (ಟಿಬಿ, ಟಿಬಿಐ, ಎನ್ಸಿಡಿಇತ್ಯಾದಿ) ಹಲವಾರು ಆಶಾ ಕಾರ್ಯಕರ್ತೆಯರಗೌರವಧನ, ಪ್ರೋತ್ಸಾಹಧನ ಹಲವಾರು ತಿಂಗಳು ಕಡಿತ ಮಾಡಲಾಗಿದೆ. ಜಿಲ್ಲಾ, ತಾಲೂಕು ಹಂತದಲ್ಲಿ ಸಮಸ್ಯೆಗಳ ಬಗ್ಗೆ ಬಗೆಹರಿಸಲು ಕೇಳಿದರೆ, ರಾಜ್ಯದಿಂದಇರುವ ಸಮಸ್ಯೆಯೆಂದು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಒಟ್ಟಾರೆಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆ.
ಮತ್ತೊAದೆಡೆ ಉಪ ನಿರ್ದೇಶಕರು, ಇಎಮ್ಎಸ್& ಆಶಾ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಇವರ ಪತ್ರ ದಿನಾಂಕ: ೨೧-೦೪-೨೦೨೬ ರಂತೆ ೯ ವಿವಿಧ ಸೇವೆಗಳನ್ನು ಆಶಾ ನಿಧಿ ತಂತ್ರಾAಶದಲ್ಲಿ ನಿಷ್ಕಿçಯೆಗೊಳಿಸಿರುದಾಗಿ ಎಂದು ತಿಳಿಸಿರುತ್ತಾರೆ. ಇದರಿಂದ ಪ್ರತೀಕಾರ್ಯಕರ್ತೆಗೆರೂ.೫೦೦-೧೦೦೦ ವರೆಗೆ ಪ್ರೋತ್ಸಾಹಧನಕಡಿತವಾಗಲಿದೆ.ಈ ಕೆಲಸಗಳನ್ನು ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಇವು ತಾಯಿ-ಮಗು ಸುರಕ್ಷತೆಗೆ, ಬಡಜನತೆಯಆರೋಗ್ಯಕ್ಕೆಅತ್ಯಂತಅಗತ್ಯಇರುವುವು ಆಗಿವೆ. ಈಗ ಕಾರ್ಯಕರ್ತೆಯರು ಈ ಸೇವೆಗಳನ್ನು ನೀಡದಿದ್ದಲ್ಲಿಜನರಿಗೆ ಹಲವಾರುಸಮಸ್ಯೆಗಳು ಆಗುತ್ತವೆ.
ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ದಿನಾಂಕ ನಿಗದಿ ಮಾಡಿ ಸಂಘದ ಮುಖಂಡರೊAದಿಗೆಕೂಡಲೆ ಸಭೆಕರೆದು ಸೂಕ್ತಕ್ರಮಕ್ಕೆ ಮುಂದಾಗಬೇಕೆAದುಈ ಮೂಲಕ ಕರ್ನಾಟಕರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)ದ ವತಿಯಿಂದ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಎಲ್ಲಾ ಆಶಾ ಮುಖಂಡರುಗಳು ಭಾಗವಹಿಸಿದ್ದರು.