ರನ್ನ ಬೆಳಗಲಿ ಯುನಿಯನ್ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಸಲಹಾ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ
ರನ್ನ ಬೆಳಗಲಿ: ಜೂ.೨೮., ಇತ್ತೀಚಿಗೆ ಮೂಡಲಗಿ ತಾಲೂಕಿನ ಯುನಿಯನ್ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯ ನೂತನ ಶಾಖೆಯು ರನ್ನ ಬೆಳಗಲಿಯಲ್ಲಿ ಉದ್ಘಾಟನೆಗೊಂಡಿತು.
ಪ್ರಧಾನ ಕಛೇರಿಯ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಪ್ಪ ಹಂದಿಗುಂದ ಉಪಾಧ್ಯಕ್ಷರಾದ ಸಂಗಮೇಶ ಕೌಜಲಗಿ,ನಿರ್ದೇಶಕರಾದ ಲಕ್ಷ್ಮಣ ಹಂದಿಗುಂದ,ನಾಗೇಶ ಧೋಂಗಡಿ,ಹಣಮಂತ ಬೆಂಡಿಕಾಯಿ,ವಿಠಲ ಮಲಗೌಡರ,ಭರಮಪ್ಪ ಕಪ್ಪಲಗುದ್ದಿ,ಗುರುದೇವಯ್ಯ ಹಿರೇಮಠ,ರಘುವೀರ ಕಪ್ಪಲಗುದ್ದಿ,ಮಹಾದೇವಿ ಹಿರೇಮಠ,ಶೈಲಾ ಉಪ್ಪಾರ,
ರಾಜು ಪೂಜೇರಿ,ಪ್ರಧಾನ ವ್ಯವಸ್ಥಾಪಕರಾದ ಭೈರನಾಥ ರಾವಳ ಜೊತೆಗೂಡಿ ರನ್ನ ಬೆಳಗಲಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಪಂಡಿತ ಬ. ಪೂಜಾರಿ, ಉಪಾಧ್ಯಕ್ಷರನ್ನಾಗಿ ರಾಮನಗೌಡ ಬ ಪಾಟೀಲ ಮತ್ತು ಸದಸ್ಯರನ್ನಾಗಿ ಅಶೋಕ ಸಿದ್ದಾಪೂರ,ಚಿಕ್ಕಪ್ಪ ನಾಯ್ಕ,ಶಿವಾನಂದ ಮಂಟೂರ,ರಾಮನಗೌಡ ಪಾಟೀಲ,ರಾಮಪ್ಪ ಹುನ್ನೂರ, ಮಹಾದೇವಪ್ಪ ಹಾದಿಮನಿ,ಮಹಾಲಿಂಗ ಗೋಡಿಗೌಡರ,ಮಾರುತಿ ಹೊಸೂರ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಿದರು.
ಶಾಖಾ ಕಾರ್ಯದರ್ಶಿಯಾದ ಯಮನಪ್ಪ ಪಡದಲ್ಲಿ ಮತ್ತು ಗ್ರಾಹಕರು, ಬ್ಯಾಂಕಿನ ಸಿಬ್ಬಂದಿಯವರು ಉಪಸ್ಥಿರಿದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.