ಹುಬ್ಬಳ್ಳಿ: ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಹೊಸ ಸಂಚಲನ ಮೂಡಿಸಿರುವ ಕೀಯಾ ಸೈರಸ್ ಕಾರಿನ ಅನಾವರಣ ಕಾರ್ಯಕ್ರಮವು ನಗರದ ಹೃದಯಭಾಗದಲ್ಲಿರುವ ನಾಗಶಾಂತಿ ಕೀಯಾ ಶೋರೂಮ್ನಲ್ಲಿ ಜರುಗಿತು. ಈ ನೂತನ ಮಾದರಿ ಕಾರನ್ನು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಚನ್ನಮ್ಮನ ಕಿತ್ತೂರು ತಾಲೂಕು ಘಟಕದ ಅಧ್ಯಕ್ಷರು ಹಾಗೂ ಉದಯವಾಣಿ ಪತ್ರಿಕೆ ವರದಿಗಾರರಾದ ಬಸವರಾಜ ಚಿನಗುಡಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಹಕರ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಸರಾಗಿರುವ ಕೀಯಾ ಸಂಸ್ಥೆಯ ಸೈರಸ್ ಮಾದರಿಯು ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಆಕರ್ಷಕ ವಿನ್ಯಾಸ ಮತ್ತು ಸ್ಮಾರ್ಟ್ ಫೀಚರ್ಸ್ಗಳ ಮೂಲಕ ವಾಹನ ಪ್ರೇಮಿಗಳ ಗಮನ ಸೆಳೆಯುತ್ತಿರುವ ಈ ಕಾರಿನ ಕುರಿತು ನಾಗಶಾಂತಿ ಕೀಯಾ ಶೋರೂಮ್ನಲ್ಲಿ ಗ್ರಾಹಕರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ವೇಳೆ ಶೋರೂಮ್ನ ಜನರಲ್ ಮ್ಯಾನೇಜರ್ ಸೋಹನ್ ಗೌಡ, ಮಹಾಂತೇಶ್ ಮತ್ತಿ, ಅನಿಲ್ರಾಜ, ಅರುಣ ಲಾಡ, ಶೇಖರ್ ಸೇರಿದಂತೆ ಶೋರೂಮ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.