ಸಿರುಗುಪ್ಪ, ಮೇ.05.: ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಸಿಂಧಿಗೇರಿ ಗ್ರಾಮದಿಂದ ಶಾನವಾಸಪುರ ಗ್ರಾಮಕ್ಕೆ ಬುನಾದಿ ಕಲ್ಲು (ಬೋಡ್ರಸ್) ತುಂಬಿಕೊಂಡು ತೆರಳುತ್ತಿದ್ದ ಟ್ರ್ಯಾಕ್ಟರ್ ಮುಗುಚಿದ ಘಟನೆ ನಡೆದಿದೆ.
ಬುನಾದಿ ಕಲ್ಲು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಆರು ಕಾರ್ಮಿಕರು ಕುಳಿತಿದ್ದರು. ಆದರೆ ಮಾರ್ಗ ಮಧ್ಯೆ ಟ್ರ್ಯಾಲಿಯ ಲಿಫ್ಟ್ ಇದ್ದಕ್ಕಿದಂತೆ ಮೇಲೆತ್ತಿದ ಕಾರಣ ಕುಳಿತಿದ್ದ ಕಾರ್ಮಿಕರ ಮೇಲೆ ಕಲ್ಲುಗಳು ಬಿದ್ದಿವೆ.
ಕಾರ್ಮಿಕ ಸುರೇಂದ್ರ ಇವರ ಎರಡು ಕಾಲು ಸ್ಥಳದಲ್ಲೆ ಮುರಿದಿದ್ದು, ಮತ್ತೊಬ್ಬ ಕಾರ್ಮಿಕ ಅಂಬರೀಶ್ ಅವರ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದೆ. ಉಳಿದ ಕೂಲಿ ಕಾರ್ಮಿಕರಾದ ಶ್ರೀಕಾಂತ್, ಬಸವರಾಜ್, ಮಣಿಕಂಠ ಮತ್ತು ಶೇಖರ್ ತೀವ್ರವಾಗಿ ಗಾಯಗೊಂಡಿದ್ದಾರೆ.