ಜಮಖಂಡಿ;ನಗರದ ಬಾಗಲಕೋಟ ವಿಶ್ವವಿದ್ಯಾಲದ ಪ್ರಥಮ ಕಘಟಿಕೋತ್ಸವವು ಶುಕ್ರವಾರ ಏ 24 ರಂದು ಬೆಳಿಗ್ಗೆ 11.30 ಗಂಟೆಗೆ ಬಿಎಲ್ಡಿಇ. ಆವರಣದ ದರ್ಬಾರ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಲಸಚಿವ ಡಾ. ಆನಂದ ದೇಶಪಾಂಡೆ ತಿಳಿಸಿದರು. ಬುಧವಾರ ವಿವಿಯ ಸಭಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದಾರೆ. ಸಹಕುಲಾಧಿಪತಿ, ಉನ್ನತಶಿಕ್ಷಣ ಸಚಿವ ಡಾ.ಎಂ,ಸಿ ,ಸುಧಾಕರ ಭಾಗವಹಿಸಲಿದ್ದು ಮಹರಾಷ್ಟ್ರ ನಾಗಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಭೀಮರಾಯ. ಎ,ಮೇತ್ರಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್ನ ಸದಸ್ಯರು ವೇದಿಕೆಯಲ್ಲಿರುತ್ತಾರೆ ಎಂದು ತಿಳಿಸಿದರು. ವಿಶ್ವ ವಿದ್ಯಾಲಯವು 2023ರಲ್ಲಿ ಪ್ರಾರಂಭವಾಗಿದೆ, 72 ಕಾಲೇಜುಗಳು ವಿವಿಯ ವ್ಯಾಪ್ತಿಗೆ ಬರುತ್ತವೆ. 2023-24 ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ತಂಡ ತೇರ್ಗಡೆಯಾಗಿದೆ . ಒಟ್ಟು 16 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ 6, ಕಾಮರ್ಸ್ ನಲ್ಲಿ ಇಬ್ಬರು, ಎಜ್ಯುಕೇಷನ್ನಲ್ಲಿ ನಾಲ್ವರು ಹಾಗೂ ವಿಜ್ಞಾನ ವಿಭಾಗದಲ್ಲಿ ನಾಲ್ಕು ಜನ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು. ಮೂವರು ಸಾಧಕರಿಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ. ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ನ ಗುರುಮಹಾಂತ ಸ್ವಾಮಿಗಳು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು, ಬಾಹ್ಯಾಕಾಶ ವಿಜ್ಞಾನಿ ಎಸ್,ನಂಬಿ ನಾಯರಾಯಣನ್, ಟೆಕ್ ಉದ್ಯಮಿ ಮಹೇಶ್ ಬೆಲ್ಲದ ಅವರನ್ನು ಗೌರವಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಕುಲಸಚಿವ ಸೋಮಲಿಂಗ ಗೆಣ್ಣೂರ, ಕುಲಸಚಿವೆ (ಮೌಲ್ಯಮಾಪನ) ಪ್ರೋ.ಲತಾ.ಕೆ.ಪಿ., ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ, ಪ್ರೋ.ದಯಾನಂದ .ಜಿ. ಸಹುಕಾರ, ಡಾ.ಮಲ್ಲಿಕಾರ್ಜುನ ಮರಡಿ , ಪ್ರೋ.ರಾಜೇಶ್ವರಿ ಮಠದ ಇದ್ದರು. ಎಂಡಿಎ ವಿಭಾಗದ ಪೂಜಾ ಅಸೊಡಿ ನಿರೂಪಿಸಿದರು.