Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಹಿರೇಮಣೂರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಇಂಡಿ :  ತಾಲೂಕಿನ ಚಿಕ್ಕಮಣೂರ ಮತ್ತು ಅಫಝಲಪೂರ ತಾಲೂಕಿನ ಹಿರೇಮಣೂರ ಗ್ರಾಮದ ಭೀಮಾ ನದಿ ಮಧ್ಯದಲ್ಲಿರುವ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಏ. ೩೦ ರಿಂದ ಜರಗುವವು.
೩೦ ರಂದು ಗುರುವಾರ ಯಲ್ಲಮ್ಮ ದೇವಿಗೆ ಬಾಸಿಂಗ ಮೆರವಣೆಗೆ ವಿವಿಧ ವಾದ್ಯ ವೈಭವಗಳೊಂದಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ೯ ಗಂಟೆಗೆ ದೇವಿಯು ಮಂದಿರಕ್ಕೆ ಆಗಮಿಸುವಳು. ರಾತ್ರಿ  ೧೦.೩೦ ಕ್ಕೆ ಪ್ರೇಮಾ ಅಫಝಲಪೂರ ಹಾಗೂ ಸಂಗಡಿಗರಿಂದ ಚೌಡಕಿ ಆಟ ಹಾಗೂ ಚೌಡಕಿ  ಪದಗಳು ಜರಗುವವು. 
ಮೇ ೧ ರಂದು  ಶುಕ್ರವಾರ ಆಗಿ ಹುಣ್ಣಿಮೆಯಂದು ಬೆಳಗ್ಗೆ ೫ ಗಂಟೆಗೆ ಡಾ. ಶಂಬುಲಿಂಗ ಶ್ರೀಗಳಿಂದ   ಪಡಸಾವಳಗಿ ಮತ್ತು ಉದಗಿರಮಠ ಇವರಿಂದ ದೇವಿಯ ರುದ್ರಾಭಿಷೇಕ ಜರುಗುವದು. ೭ ಗಂಟೆಗೆ ದೇವಿಗೆ ವಸ್ತ್ರಾಭರಣ, ೯ ಗಂಟೆಗೆ ದೇವಿಗೆ ನೈವೆಧ್ಯ, ಸಾಯಂಕಾಲ ೪ ಗಂಟೆಗೆ ದೇವಿಯ ಪಲ್ಲಕ್ಕಿ ಮೆರವಣೆಗೆ ನವಿಲು ಕುಣಿತ ಕರಡಿ ಕುಣಿತ ಕುದರೆ ಕುಣಿತ ಗೊಂಬೆ ಕುಣಿತ ಡೊಳ್ಳಿನ ವಾಲಗ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಭೀಮಾ ನದಿಯಲ್ಲಿರುವ ದೇವಿಯ ಮಂದಿರಕ್ಕೆ ತಲುಪುವದು. ೫ ಗಂಟೆಗೆ ಬಾಸಿಂಗ ಮೆರವಣೆಗೆ ದೇವಿಯ ಪಲ್ಲಕ್ಕಿ  ಸ್ವಾಗತಿಸುವದು ೭ ಗಂಟೆಯಿಂದ ೯ ರ ವರೆಗೆ ಮದ್ದು ಸುಡುವದು  ನಂತರ ಪಲ್ಲಕ್ಕಿ ಮೆರವಣೆಗೆ ಗ್ರಾಮದಲ್ಲಿರುವ ದೇವಿಯ  ಮಂದಿರಕ್ಕೆ ಆಗಮಿಸುವದು ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಕುರಿಗಳ ಭವ್ಯ ಜಾತ್ರೆ ನಡೆಯಲಿದೆ.  ಮೇ ೨ ರಂದು ಬೆಳಗ್ಗೆ ೯ ಗಂಟೆಗೆ  ವಿದ್ಯಾಶ್ರೀ ಮಸಬಿನಾಳ ಹರದೇಶ ನಾಗೇಶ  ಹಾಗೂ ಮುಕ್ತುಮಸಾಬ ಸೊನ್ನಾಳ ಅವರಿಂದ  ಗೀ ಗೀ ಪದಗಳು ಜರುಗುವವು. ಸಾಯಂಕಾಲ ೫ ಗಂಟೆಯಿಂದ  ೭ ಗಂಟೆಯ ವರೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ  ಕುಸ್ತಿಗಳು ನಡೆಯಲಿವೆ. ಜಾನುವಾರು ಜಾತ್ರೆಯಲ್ಲಿ  ಉತ್ತಮ ಜಾನುವಾರುಗಳಿಗೆ ಯಲ್ಲಮ್ಮ ದೇವಿ ಟ್ರಸ್ಟ  ಕಮಿಟಿ ವತಿಯಿಂದ  ೫ ರಂದು ಬಹುಮಾನ ವಿತರಿಸಲಾಗುವದು. ಜಾತ್ರೆಗೆ ಬರುವ ಭಕ್ತರಿಗೆ ಇಂಡಿಯಿಂದ ನೇರ ಬಸ್ಸಿನ ಸೌಕರ್ಯ ಇರುವದು ಎಂದು ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ