ಘಟಪ್ರಭಾ,ಜೂ,೧೫ : ಇಲ್ಲಿನ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಸಹಕಾರ ಆಸ್ಪತ್ರೆ ಸಂಸ್ಥೆ ಇದರ ಅಮೃತ ಮಹೋತ್ಸವದ ಅಂಗವಾಗಿ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಸಹಕಾರದೊಂದಿಗೆ ಶ್ರೀ ಜೆ ಜಿ ಸಿ ಎಚ್ ಎಸ್ ಸಹಕಾರಿ ಮಹರ್ಷಿ ಶ್ರೀ ಬಿ ಎ ಪಾಟೀಲ ಆಯುರ್ವೇದಿಕ ಮಹಾವಿದ್ಯಾಲಯ ಸ್ವಸ್ಥವೃತ ಮತ್ತು ಯೋಗ ವಿಭಾಗ, ಎನ್ ಎಸ್ ಎಸ್ ವತಿಯಿಂದ ದಿ ೧೨-೬-೨೦೨೬ ರಿಂದ ದಿ. ೨೧-೬-೨೦೨೬ ರವರೆಗೆ ಅಂತಾರಾಷ್ಟ್ರೀಯ ಯೋಗ ದಿವಸದ ಪ್ರಯುಕ್ತ ೧೦ ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ೬ ರಿಂದ ೭ ಘಂಟೆಯವರೆಗೆ ನಡೆಯುವ ಯೋಗಬ್ಯಾಸ ಕಾರ್ಯಕ್ರಮವನ್ನು ಎಸ್ ಡಿ ಟಿ ಹೈಸ್ಕೂಲ್ ಪ್ರಾಚಾರ್ಯರಾದ ಜಗದೀಶ ಮಠಪತಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅನೇಕರು ಈ ವರ್ಷದ ಅಂತಾರಾಷ್ಟ್ರೀಯ ಯೋಗದ ಘೋಷವಾಕ್ಯ ಆರೋಗ್ಯಕರ ವಯೋಭಿವೃದ್ಧಿಗೆ ಯೋಗ ಮಹತ್ತರ ಪಾತ್ರ ವಹಿಸುತ್ತದೆ, ಆರೋಗ್ಯಕ್ಕೆ ಸಕ್ರಿಯ, ಸಮತೋಲನ ಪಾಠವನ್ನು ಯೋಗ ಕಲಿಸುತ್ತದೆಮತ್ತು ದೈಹಿಕ, ಮಾನಸಿಕ, ಆದ್ಯಾತ್ಮಿಕ ವೃದ್ಧಿಗೆ ಯೋಗ ಮಹತ್ತರ ಪಾತ್ರ ವಹಿಸುತ್ತದೆ ಅದಕ್ಕಾಗಿ ಈ ಯೋಗ ಶಿಬಿರದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂನ್ಸುಪಾಲರಾದ ಡಾ. ಜೆ ಕೆ ಶರ್ಮ, ಯೋಗ ವಿಭಾಗದ ಮುಖ್ಯಸ್ಥ ಡಾ. ಲಿಂಗರಾಜ ತೆಗ್ಗಿ, ಡಾ. ರಾಜಶೇಖರ ಜಕಾತಿ, ಡಾ. ವೀರೇಶ್ ಹೊಸಮಠ, ಬಿ ಎನ್ ವಾಯ್ ಎಸ್ ಪ್ರಾಂಶುಪಾಲರಾದ ಡಾ. ರಾಜು ಜಾವಗೌಡರ, ಆಯುರ್ವೇದಿಕ ಮತ್ತು ಬಿ ಎನ್ ವಾಯ್ ಎಸ್ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.