ಇಂಡಿ : ಗ್ರಾಮೀಣ ಪ್ರದೇಶದ ಮಕ್ಕಳ ವ್ಯಾಸಂಗಕ್ಕಾಗಿ ತಾಲೂಕಿನಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮನವಿಯ ಮೇರೆಗೆ ಶಿರಶ್ಯಾಡ ಸೇರಿದಂತೆ ಮೂರು ಸರಕಾರಿ ಪಪೂ ಕಾಲೇಜು ಮಂಜೂರಾತಿ ಪಡೆದಿದ್ದಾರೆ.
ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ ಹೊಸಮನಿಯವರು ಸರಸ್ವತಿಗೆ ಪೂಜೆ ಸಲ್ಲಿಸುವ ಮೂಲಕ ಪಪೂ ಮಹಾವಿದ್ಯಾಲಯಕ್ಕೆ ಚಾಲನೆ ನೀಡಿದರು.
ಶಿರಶ್ಯಾಡ ಗ್ರಾಮದ ಉಪನ್ಯಾಸಕ ಸಿ.ಎನ್.ಪೂಜಾರಿ ಮಾತನಾಡಿ ಶಿರಶ್ಯಾಡದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಬ್ಯಾಸಕ್ಕೆ ಸಿಂದಗಿ ಅಥವಾ ಇಂಡಿಗೆ ಹೋಗಬೇಕಾಗಿತ್ತು. ಈಗ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಧುರೀಣ ಚಂದ್ರಶೇಖರ ಪಾಸೋಡಿ ಮಾತನಾಡಿ ಇಂಡಿಯ ಶಾಸಕರು ಹಡಲಸಂಗ, ಬಸನಾಳ ಮತ್ತು ಶಿರಶ್ಯಾಡ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ತಂದು ಗ್ರಾಮದ ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಅನುಕೂಲ ವಾಗಲಿದೆ ಎಂದರು.
ನಿವೃತ್ತ ಉಪನ್ಯಾಸಕ ಎಸ್.ಎಸ್.ಮಜ್ಜಗಿ, ಆರ್.ಆರ್.ಬಗಲಿ ವಿಜಯಕುಮಾರ ಬೆಕಿನಾಳ, ಅಣ್ಣಾರಾಯ ಬಿರಾದಾರ ಮಾತನಾಡಿದರು.
ಮುಖ್ಯೋಪಾಧ್ಯಾಯ ಎಮ್,ವಾಯ್ ಉಪ್ಪಾರ, ಎನ್.ಎಸ್.ತೆಗ್ಗೆಳ್ಳಿ, ಡಾ.ಸತೀಶ ಈಶ್ವರಗೊಂಡ, ಪಿಡಿಒ ಮುತ್ತಪ್ಪ ಜಾಡದ ಮತ್ತಿತರಿದ್ದರು.
ಪ್ರಕಾಶ ಬಿರಾದಾರ, ಸಂಜೀವಕುಮಾರ ಬಿರಾದಾರ, ಅರವಿಂದ ಬಿರಾದಾರ, ಭೂಮಣ್ಣ ನಾಟಿಕಾರ, ಸುಭಾಸ ಪವಾರ, ಶ್ರೀಶೈಲ ಬಗಲಿ, ರಾಜಕುಮಾರ ಪಾಸೋಡಿ, ಈಶ್ವರಗೌಡ ಬಗಲಿ, ರಾಮ ನಾಟಿಕಾರ, ರಾಘು ತಡ್ಲಗಿ, ಯಶವಂತ ತೆಲಗ, ಊರಿನ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
