Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶಾಭಿಮಾನ ಮೂಡಿಸಿದ ಯೋಧರ ತ್ಯಾಗ, ಬಲಿದಾನ ದೊಡ್ಡದು; ಸಂಗನಗೌಡ


ವಿಜಯಪುರ- ೧೫- ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು  ಸ್ವಾತಂತ್ರ ಯೋಧರಾದ ದಿ. ಚಂದಪ್ಪ ತೋಟಪ್ಪ ಗೆಜ್ಜಿ (ಸಾಸನೂರ) ಇವರ ನಗರದ ಮನೆ ಆವರಣದಲ್ಲಿ ಧ್ವಜಾರೋಹ ನೆರವೇರಿಸಲಾಯಿತು.

ಸಂಗನಗೌಡ ನಿಂ. ಬಿರಾದಾರ, ಸಂಗನಗೌಡ ನಾಡಗೌಡ, ಬಿ.ಎಂ. ಪಾಟೀಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರಕ್ಕಾಗಿ ಹೋರಾಡಿದ ಚಳುವಳಿ ನಡೆದು ಬಂದ ದಾರಿ ಹಾಗೂ ಸಂಘ ಸಂಸ್ಥೆಗಳು ರಾಷ್ಟ್ರದ ಜನರಲ್ಲಿ ದೇಶಾಭಿಮಾನ ಮೂಡಿಸಿದ ಯೋಧರ ತ್ಯಾಗ ಬಲಿದಾನ ಬಗ್ಗೆ ತಿಳಿಸಿ  ಅಂತವರ ಸಾಲಿನಲ್ಲಿ ದಿ. ಚಂದಪ್ಪ ತೋಟಪ್ಪ ಗೆಜ್ಜಿ ಇವರು ಒಬ್ಬರೆಂದು ಹೇಳಲು ನಮಗೆ ಹೆಮ್ಮೆ ಅನಿಸುತ್ತದೆ. ಉತ್ತರ ಕರ್ನಾಟಕದ ಏಳು ಬಂಡಾಯಗಳ ಬಗ್ಗೆ ತಿಳಿಸಿದರು.


ದಿ. ಚಂದಪ್ಪ ತೋಟಪ್ಪ ಗೆಜ್ಜಿ ಇವರ ಮೊಮ್ಮಗನಾದ ಡಾ. ಚಂದ್ರಶೇಖರ  ಸುರೆಶ ಗೆಜ್ಜಿ ಇವರು ತಮ್ಮ ತಾತನವರು ಹುಟ್ಟಿದ ಸ್ಥಳ ಅವರು ನಡೆದು ಬಂದ ದಾರಿ ಹೋರಾಟ ಮತ್ತು ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಮಾಹಿತಿ ಜೊತೆಗೆ ಸೆರೆಮನೆ ವಾಸ ಕೂಡ ನಿಖರವಾದ ದಿನಾಂಕ ಮತ್ತು ಇಸವಿಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಇಂಥವರ ಮನೆಯಲ್ಲಿ ಜನ್ಮ ತಾಳಿದ ನಾವು ಭಾಗ್ಯವಂತರು ಮತ್ತು ಇಂತಹ ಅನೇಕ ಸ್ವಾತಂತ್ರ ಯೋಧರ ಸಂಕ್ಷಿಪ್ತ ಮಾಹಿತಿಯೊಂದಿಗೆ ನಮ್ಮ ತಾಯಿಯವರಾದ ಶ್ರೀಮತಿ ಕಮಲಾ ಸುರೇಶ ಗೆಜ್ಜೆ ಇವರು ಸಣ್ಣ ಮಕ್ಕಳಿಗಾಗಿ ಕಿರು ಪುಸ್ತಕ ರಚಿಸಿ ಈಗಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದು ನಮ್ಮ ಮನೆತನದ ಗೌರವಕ್ಕೆ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗದೀಶಗೌಡ ಪಾಟೀಲ, ಕುಮಾರಗೌಡ ಪಾಟೀಲ, ಗುಂಡು ಗುಂಡದ, ಶಂಕರಗೌಡ ಬಿರಾದಾರ, ಚವ್ಹಾಣ, ಮುತ್ತು, ಪಟ್ಟಣಶೆಟ್ಟಿ, ದೇಶಪಾಂಡೆ, ಬಿರಾದಾರ, ಕತ್ನಳ್ಳಿ ಮುಂತಾದವರು ಭಾಗವಹಿಸಿದ್ದರು.  ಅನೇಕ ಪ್ರಶಸ್ತಿ ವಿಜೇತರಾದ ಬಿ.ಎಂ. ಪಾಟೀಲ, ಮಹೇಶ ರಾಮನಾಥ ತೋಟದ ಇವರಿಗೆ ಸುರೇಶ ಗೆಜ್ಜಿ ಇವರಿಗೆ ಸನ್ಮಾನಿಸಿದರು. ಕಮತಗಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ