Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ : ಡಾ.ಮಹಾಂತ ಪ್ರಭು ಸ್ವಾಮೀಜಿ


ಅಥಣಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಮಕ್ಕಳಿಗೆ ಉತ್ತಮವಾದ ಶಿಕ್ಷಣದ ಜೊತೆಗೆ  ಒಳ್ಳೆಯ ಸಂಸ್ಕಾರವನ್ನು  ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ ಎಂದು  ಶೇಗುಣಸಿಯ ವಿರಕ್ತಮಠದ  ಡಾ.ಮಹಾಂತ ಪ್ರಭು ಸ್ವಾಮೀಜಿ ಹೇಳಿದರು.


 ಅವರು ಶನಿವಾರ ಇಲ್ಲಿನ ಸುಕ್ಷೇತ್ರ ಗಚ್ಛಿನಮಠದಲ್ಲಿ ಲಿo. ಮುರುಘೇಂದ್ರ ಶಿವಯೋಗಿಗಳ  189ನೇ ಜಯಂತಿ ಉತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾಗಿದ್ದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ  ಆಧ್ಯಾತ್ಮಿಕ ಮಾರ್ಗದಲ್ಲಿ  ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ  ಮತ್ತು ಮಾನವೀಯ ಮೌಲ್ಯಗಳನ್ನ ಕಲಿಸಿಕೊಟ್ಟಾಗ  ಉತ್ತಮ ನಾಗರಿಕರಾಗಿ  ಬೆಳೆಯಲು ಸಾಧ್ಯ ಎಂದು ಎಂದು ಹೇಳಿದರು.


 ಅಥಣಿ ಭೂಮಿಯನ್ನು  ಪಾವನಗೊಳಿಸಿದ  ಮುರುಘೇಂದ್ರ ಸ್ವಾಮಿಗಳು  ಬಸವಣ್ಣನವರ ವಚನಗಳನ್ನು  ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡು  ಶಿವಯೋಗದ ಶಿಖರವನ್ನು ಸಾಧಿಸಿದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ  ನಾವೆಲ್ಲ ನಡೆದಾಗ  ನಮ್ಮ ಬದುಕು ಕೂಡ ಸುಂದರವಾಗುತ್ತದೆ ಎಂದು ಹೇಳಿದರು.


ಸಮಾರಂಭದ ನೇತೃತ್ವ ವಹಿಸಿದ್ದ  ಸುಕ್ಷೇತ್ರ ಗಚ್ಚಿನ ಮಠದ  ಶಿವಬಸವ  ಸ್ವಾಮೀಜಿ ಮಾತನಾಡಿ  ಶಿವಯೋಗದ ಶಿಖರವನ್ನು ಸಾಧಿಸುವ ಮೂಲಕ ಮುರುಗೇಂದ್ರ ಸ್ವಾಮಿಗಳು ಕನ್ನಡ ನಾಡಿನಲ್ಲಿಯೇ ಅಥಣಿಯ ಶಿವಯೋಗಿಗಳು ಎಂದು ಪ್ರಖ್ಯಾತರಾಗಿದ್ದಾರೆ.


ಶಿವಯೋಗಿಗಳು ಬೋಧನೆಗಿಂತ ತಾವು ಮಾಡುವ ಕಾರ್ಯದಿಂದಲೇ ಸಾಕಷ್ಟು ವಿಷಯಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಿದ್ದರು. ವಿಶ್ವಗುರು ಬಸವಣ್ಣನವರ ವಚನಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಶಿವಯೋಗ ಸಾಧನೆಯ ಮೂಲಕ ಜಗತ್ತಿಗೆ ಬೆಳಕಾದವರು. ಅವರ ಜಯಂತಿ ಉತ್ಸವದಲ್ಲಿ  ನಾವು ನೀವೆಲ್ಲರೂ ಪಾಲ್ಗೊಳ್ಳುವುದೇ ಒಂದು ಸಂಭ್ರಮ ಎಂದರು.


 ಈ ಸಂದರ್ಭದಲ್ಲಿ   ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ಗಡಿ ಇಂಗರಾಜ  ಮಹಾಂತ ಸಿದ್ದೇಶ್ವರ ಸ್ವಾಮಿಜಿ, ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಸಾಹಿತಿ ಡಾ.ಮಾಂತೇಶ ಉಕಲಿ, ಶಿವಕುಮಾರ ಉಮರಾಣಿ, ಬಸವರಾಜು ಉಮರಾಣಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಮನಗೌಡ ಪಾಟೀಲ ಸ್ವಾಗತಿಸಿದರು. ಮಹಾಂತೇಶ ಉಕ್ಕಲಿ ನಿರೂಪಿಸಿ ವಂದಿಸಿದರು.


ವಿಜೃಂಭಣೆಯಿಂದ  ಪಲ್ಲಕ್ಕಿ ಉತ್ಸವ :  ಮುರಗೇಂದ್ರ ಶಿವಯೋಗಿಗಳ ಜಯಂತಿ ಉತ್ಸವದ ಅಂಗವಾಗಿ  ಸುಕ್ಷೇತ್ರ ಗಚ್ಚಿನ ಮಠದಿಂದ  ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  ಮದುವೆ ಗಚ್ಚಿನಮಠದಲ್ಲಿ ಸಮಾರೋಪಗೊಂಡಿತು. ಸಾಯಂಕಾಲ ಧರ್ಮಸಭೆ ಪೂರ್ವದಲ್ಲಿ  ಬಾಲ ಶಿವಯೋಗಿಗಳ ತೊಟ್ಟಿಲು ಉತ್ಸವ ಕಾರ್ಯಕ್ರಮ ಜರುಗಿತು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ